ದೇಶ

ಬಿಜೆಪಿ-ಶಿವಸೇನೆ ಮೈತ್ರಿ ಪ್ರಬಲ: ಯಾರಿದಂಲೂ ಮುರಿಯಲು ಸಾಧ್ಯವಿಲ್ಲ- ಫಡ್ನಾವೀಸ್

Shilpa D
ಅಮರಾವತಿ: ಬಿಜೆಪಿ ಮತ್ತು ಶಿವಸೇನೆ ನಡುವಿನ ಮೈತ್ರಿ ಗಟ್ಟಿಯಾಗಿದ್ದು,ಯಾರಿಂದಲೂ ಅದನ್ನು ಮುರಿಯಲು ಸಾಧ್ಯವಿಲ್ಲ ಎಂದು  ಮಹಾರಾಷ್ಟ್ರ ಮುಖ್ಯಮಂತ್ರಿ  ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಫಡ್ನವೀಸ್, ಹಿಂದುತ್ವ ಪಕ್ಷಗಳು ಕೈಜೋಡಿಸಿದ್ದು, ಇಬ್ಬರದ್ದೂ ಒಂದೇ ತತ್ವ ಸಿದ್ದಾಂತವಾಗಿದೆ, ಹೀಗಾಗಿ ಭವಿಷ್ಯದಲ್ಲಿಯೂ ಮೈತ್ರಿ ಹೀಗೆಯೇ ಇರಲಿದೆ ಎಂದು ಹೇಳಿದ್ದಾರೆ.
ಅಧಿಕಾರಕ್ಕಾಗಿ ಕೆಲವರು ಮೈತ್ರಿ ಹಾಳು ಮಾಡಲು ಯತ್ನಿಸುತ್ತಿದ್ದಾರೆ, ಒದರೆ ನಾವು ಒಮ್ಮೆ ಮಾಡಿಕೊಂಡ ಮೈತ್ರಿಯನ್ನು ಮುರಿಯಲು ಸಾಧ್ಯವಿಲ್ಲ ಎಂದು ಫಡ್ನವೀಸ್ ಹೇಳಿದ್ದಾರೆ, ರ್ಯಾಲಿಯಲ್ಲಿ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಮುಂತಾದವರು ಭಾಗವಹಿಸಿದ್ದರು. 
SCROLL FOR NEXT