ದೇಶ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೌರತ್ವ ಮಸೂದೆಗೆ ತಿಲಾಂಜಲಿ: ರಾಹುಲ್ ಗಾಂಧಿ

Srinivas Rao BV
ಇಟಾನಗರ: ಈಶಾನ್ಯ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಚಾಲನೆ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾಗರಿಕ ಪೌರತ್ವ ಮಸೂದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಹೇಳಿದ್ದಾರೆ. 
ಅಧಿಕಾರಕ್ಕೆ ಬಂದಲ್ಲಿ ನಾಗರಿಕ ಪೌರತ್ವ ಮಸೂದೆಯನ್ನು ಜಾರಿಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ನಾವು ಪೌರತ್ವ ಮಸೂದೆಗೆ ವಿರುದ್ಧವಾಗಿದ್ದೇವೆ. ಈ ಮಸೂದೆ ಜಾರಿಗೊಳ್ಳುವುದಕ್ಕೆ ನಾವು ಬಿಡುವುದಿಲ್ಲ, ನಾಗರಿಕ ಪೌರತ್ವ ಮಸೂದೆ ಈಶಾನ್ಯ ರಾಜ್ಯದವರ ಹಿತಾಸಕ್ತಿಗೆ ವಿರುದ್ಧವಾಗಿದೆ, ನಾವು ಅಧಿಕಾರಕ್ಕೆ ಬಂದರೆ ಪೌರತ್ವ ಮಸೂದೆಯನ್ನು ಶಾಶ್ವತವಾಗಿ ರದ್ದುಗೊಳಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
SCROLL FOR NEXT