ದೇಶ

ನಾವು ಮಾರಾಟಕ್ಕಿಲ್ಲ, ಯಾವುದೇ ಕುದುರೆ ವ್ಯಾಪಾರದಲ್ಲಿ ನಾವು ಭಾಗಿಯಾಗುವುದಿಲ್ಲ: ಕಮಲ್ ಹಾಸನ್

Shilpa D
ಚೆನ್ನೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಯಾವುದೇ ಕುದುರೆ ವ್ಯಾಪಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಮಕ್ಕಳ್ ನೀಧಿ ಮೈಯಮ್ ಪಕ್ಷದ ಮುಖಂಡ ಹಾಗೂ ನಟ ಕಮಲ್ ಹಾಸನ್ ಹೇಳಿದ್ದಾರೆ.
ನಮ್ಮ ಪಕ್ಷ  ಸಮತೋಲಿತವಾಗಿದ್ದು, ನಾವು ಯಾವುದೇ ಕುದುರೆ ವ್ಯಾಪಾರದಲ್ಲಿ ಭಾಗಿಯಾಗುವುದಿಲ್ಲ, ಅಥವಾ ಮಾರಾಟಕ್ಕಿಲ್ಲ, ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಚ, ಹಣದಿಂದ ನಮ್ಮನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ,
ಲೋಕಸಭೆ ಚುನಾವಣೆಗೆ ತಮಿಳುನಾಡು ಮತ್ತು ಪುದುಚೆರಿಗಳಿಗೆ 21 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ, ಆದರೆ ಈ ಪಟ್ಟಿಯಲ್ಲಿ ಕಮಲ ಹಾಸನ್ ಹೆಸರಿಲ್ಲ, 
ನನ್ನ ಆದ್ಯತೆ ಯಾವಾಗಲೂ ಮೊದಲು ತಮಿಳುನಾಡು ಆಗಿರುತ್ತದೆ, ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ನಾನು ಹೋಲಿಕೆ ಮಾಡಿಕೊಳ್ಳುವುದಿಲ್ಲ, ಮಾಡಿರುವ ತಪ್ಪಿನಲ್ಲಿ ಇಬ್ಬರಿಗೂ ಸಮಾನ ಪಾಲಿದೆ ಎಂದು ಹೇಳಿದ್ದಾರೆ.
SCROLL FOR NEXT