ಅಭಿನಂದನ್ ವರ್ತಮಾನ್ 
ದೇಶ

ರಜೆ ಇದ್ದರೂ ಮನೆಗೆ ಹೋಗದೆ ಶ್ರೀನಗರಕ್ಕೆ ತೆರಳಿದ ವಿಂಗ್​ ಕಮಾಂಡರ್​ ಅಭಿನಂದನ್

ನಾಲ್ಕು ವಾರಗಳ ಕಾಲದ ಅನಾರೋಗ್ಯದ ರಜೆಯಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರಜೆ ಸಮಯದಲ್ಲಿ ಕುಟುಂಬದವರೊಡನೆ ಕಾಲ ಕಳೆಯದೆ ಶ್ರೀನಗರದ ವಾಯುನೆಲೆಗೆ ತೆರಳಿದ್ದಾರೆ

ಶ್ರೀನಗರ: ನಾಲ್ಕು ವಾರಗಳ ಕಾಲದ ಅನಾರೋಗ್ಯದ ರಜೆಯಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರಜೆ ಸಮಯದಲ್ಲಿ ಕುಟುಂಬದವರೊಡನೆ ಕಾಲ ಕಳೆಯದೆ ಶ್ರೀನಗರದ ವಾಯುನೆಲೆಗೆ ತೆರಳಿದ್ದಾರೆ.
ಭಾರತಕ್ಕೆ ನುಗ್ಗಿದ್ದ ಪಾಕಿಸ್ತಾನ ಯುದ್ಧ ವಿಮಾನವನ್ನು ಬೆನ್ನಟ್ಟಿ ಹೋಗಿ ಹೊಡೆದಿದ್ದ ಅಭಿನಂದನ್ ಪಾಕ್ ಸೇನೆಗೆ ಸಿಕ್ಕು ಎರಡೂವರೆ ದಿನಗಳ ನಂತರ ಭಾರತಕ್ಕೆ ಸುರಕ್ಷಿತವಾಗಿ ಹಿಂತಿರುಗಿದ್ದರು. ಭಾರತಕ್ಕೆ ಮರಳಿದ್ದ ಅಭಿನಂದನ್ ವಾಯುಪಡೆಯಿಂದ ವಿಚಾರಣೆಗೆ ಒಳಗಾಗಿದ್ದು ಅವರ ವಿಚಾರಣೆ ನಂತರ ನಾಲ್ಕು ವಾರಗಳ ಕಾಲ ಅನಾರೋಗ್ಯದ ರಜೆ ಮೇಲೆ ತೆರಳುವಂತೆ ಹೇಳಲಾಗಿತ್ತು.
ಈ ರಜೆಯಲ್ಲಿ ಚೆನ್ನೈನಲ್ಲಿರುವ ತನ್ನ ಕುಟುಂಬಸ್ಥರೊಡನೆ ಇರಬಹುದಾದ ಆಯ್ಕೆಯನ್ನು ಬಳಸಿಕೊಳ್ಳದ ಅಭಿನಂದನ್ ಶ್ರೀನಗರದಲ್ಲಿನ ಸಹೋದ್ಯೋಗಿಗಳ ಜತೆಗೆ ಇರಲಿದ್ದಾರೆ. ಪ್ರಸ್ತುತ ತಮ್ಮ ನೆಚ್ಚಿನ ಸಹೋದ್ಯೋಗ್ಗಿಗಳ ಜತೆಗಿರುವ ಅಭಿನಂದನ್ ರಜೆ ಬಳಿಕ ದೆಹಲಿಗೆ ಮರಳಲಿದ್ದಾರೆ.
ದೆಹಲಿಯಲ್ಲಿ ವೈದ್ಯರು ಅಭಿನಂದನ್ ಆರೋಗ್ಯ ಪರೀಕ್ಷೆ ನಡೆಸಲಿದ್ದು ಅವರ ದೈಹಿಕ ಸಾಮರ್ಥ್ಯವನ್ನು ಪರೀಕ್ಷ್ಸಿಸಿ ಕರ್ತವ್ಯಕ್ಕೆ ಮರಳಬಹುದೆ, ಇಲ್ಲವೆ ಎನ್ನುವುದನ್ನು ನಿರ್ಧರಿಸುತ್ತಾರೆ.
ವಾಯುಸೇನೆಯ ವಿಂಗ್​ ಕಮಾಂಡರ್​ ಪಾಕಿಸ್ತಾನದ F16 ಅನ್ನು ಭಾರತ ವಾಯುದಾಳಿಯ ಬೆನ್ನಲ್ಲೇ ಹೊಡೆದುರುಳಿಸಿದರೂ ಅವರಿದ್ದ ವಿಮಾನ ಪಾಕಿಸ್ತಾನದಲ್ಲಿ ಪತನವಾಗಿದ್ದು ಅವರು ಪಾಕ್ ಸೇನೆಗೆ ಸೆರೆಸಿಕ್ಕಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT