ದೇಶ

ಬೋನಿನಲ್ಲಿದ್ದ ಚಿರತೆಯನ್ನು ಕೆಣಕಿ ಆಸ್ಪತ್ರೆ ಸೇರಿದ! 

Srinivas Rao BV

ತುಮಕೂರು: ಕೆಲವೊಮ್ಮೆ ತಮಾಷೆ ಮಾಡಲು ಹೋಗಿ ಅನಾಹುತಗಳು ಸಂಭವಿಸುತ್ತವೆ. ಅಂಥಹದ್ದೇ ಅನಾಹುತ ತುಮಕೂರಿನಲ್ಲಿ ನಡೆದಿದ್ದು, ಬೋನಿನಲ್ಲಿದ್ದ ಚಿರತೆಯನ್ನು ಕೆಣಕಲು ಹೋಗಿ ವ್ಯಕ್ತಿಯೋರ್ವ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನು ಹಾಕಿದ್ದರು, ಬೋನಿಗೆ ಬಿದ್ದಿದ್ದ ಚಿರತೆಯನ್ನು ಕಡ್ಡಿ ತೆಗೆದುಕೊಂಡು ಕೆಣಕಲು ಹೋಗಿದ್ದಾನೆ ಕೋಪಗೊಂಡ ಚಿರತೆ ಕಡ್ಡಿ ಸಮೇತ ರಮೇಶ್‍ನನ್ನು ಬೋನಿನ ಬಳಿ ಎಳೆದುಕೊಂಡು ಕೈ ಮುಖವನ್ನು ಪರಚಿದೆ. ಘಟನೆಯಲ್ಲಿ ಮುಖ ಕೈಗಳಿಗೆ ಗಾಯವಾಗಿದ್ದು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
 

SCROLL FOR NEXT