ದೇಶ

ಕೇಂದ್ರದಿಂದ ಅರ್ಥವ್ಯವಸ್ಥೆಯ ಕೆಟ್ಟ ನಿರ್ವಹಣೆ: ಟ್ವೀಟ್​ ಮಾಡಿ ಮಾಜಿ ಸಚಿವ ಪಿ.ಚಿದಂಬರಂ ಕಿಡಿ

Srinivasamurthy VN

ನವದೆಹಲಿ: ಕೇಂದ್ರದಲ್ಲಿರುವ ಮೋದಿ ಸರ್ಕಾರ ಅರ್ಥವ್ಯವಸ್ಥೆಯನ್ನು ತುಂಬಾ ಕೆಟ್ಟದಾಗಿ ನಿರ್ವಹಣೆ ಮಾಡುತ್ತಿದೆ ಎಂದು ಮಾಜಿ ವಿತ್ತ ಸಚಿವರ ಪಿ ಚಿದಂಬರಂ ಹೇಳಿದ್ದಾರೆ.

ಐಎಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಪ್ರಸ್ತುತ ವಿಚಾರಣಾಧೀನ ಕೈದಿಯಾಗಿರುವ ಪಿ ಚಿದಂಬರಂ ಅವರು, ತಿಹಾರ್ ಜೈಲಿನಿಂದಲೇ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಇನ್ನು ಚಿದಂಬರಂ ಜೈಲಿನಲ್ಲಿದ್ದು ಅವರು ಹೇಗೆ ಟ್ವೀಟ್ ಮಾಡಲು ಸಾಧ್ಯ ಎಂಬ ಪ್ರಶ್ನೆಗಳಿಗೂ ಉತ್ತರಿಸಿರುವ ಚಿದಂಬಂರಂ, ನಾನು ನನ್ನ ಟ್ವೀಟ್ ಖಾತೆಯನ್ನು ನಿರ್ವಹಣೆ ಮಾಡುವಂತೆ ಸೂಚಿಸಿದ್ದು, ಕುಟುಂಬ ಸದಸ್ಯರ ನೆರವಿನೊಂದಿಗೆ ಟ್ವೀಟ್​ ಅಪ್ಡೇಟ್ ಮಾಡಿರುವುದಾಗಿ ಹೇಳಿದ್ದಾರೆ.

ಅಲ್ಲದೆ ಈ ಟೀಕೆಗೆ ಪೂರಕವಾಗಿ ಅವರು ದ ಇಕನಾಮಿಸ್ಟ್​ ಮ್ಯಾಗಜಿನ್​ ನ ಸಂಪಾದಕೀಯವನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಡಾ. ಅಭಿಜಿತ್ ಬ್ಯಾನರ್ಜಿ ಕಳೆದ ವಾರ ಹೇಳಿದ ‘ಡುಯಿಂಗ್ ಬ್ಯಾಡ್ಲಿ’ ಎಂಬ ಟೀಕೆಯನ್ನೂ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ. 

SCROLL FOR NEXT