ಕಪ್ಪುಹಣದ ಮೇಲೆ  ಮತ್ತೊಮ್ಮೆ ಗುರಿ;  ಆಸ್ತಿಗಳಿಗೆ  ಆಧಾರ್  ಕಡ್ಡಾಯಗೊಳಿಸಲು  ಮೋದಿ ಸರ್ಕಾರದ ಸಿದ್ದತೆ 
ದೇಶ

ಕಪ್ಪುಹಣದ ಮೇಲೆ  ಮತ್ತೊಮ್ಮೆ ಗುರಿ;  ಆಸ್ತಿಗಳಿಗೆ  ಆಧಾರ್  ಕಡ್ಡಾಯಗೊಳಿಸಲು  ಮೋದಿ ಸರ್ಕಾರದ ಸಿದ್ದತೆ

ನ ಖಾವೋಂಗಾ ..  ನ ಖಾನೆ ದೋಂಗಾ( ನಾನು ಭ್ರಷ್ಟಾಚಾರ ಮಾಡುವುದಿಲ್ಲ ...  ಭ್ರಷ್ಟಾಚಾರ ನಡೆಸಲು  ಯಾರನ್ನೂ ಬಿಡುವುದಿಲ್ಲ) ಎಂದು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣದ ಮೇಲೆ  ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ಗೆ ಸಿದ್ಧತೆ ನಡೆಸಿದ್ದಾರೆ. 

ನವದೆಹಲಿ: ನ ಖಾವೋಂಗಾ ..  ನ ಖಾನೆ ದೋಂಗಾ( ನಾನು ಭ್ರಷ್ಟಾಚಾರ ಮಾಡುವುದಿಲ್ಲ ...  ಭ್ರಷ್ಟಾಚಾರ ನಡೆಸಲು  ಯಾರನ್ನೂ ಬಿಡುವುದಿಲ್ಲ) ಎಂದು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣದ ಮೇಲೆ  ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ಗೆ ಸಿದ್ಧತೆ ನಡೆಸಿದ್ದಾರೆ. 
 
ಅಡಗಿಸಿಟ್ಟಿರುವ ಕಪ್ಪುಹಣ ಹೊರಗೆ ತರಲು ಸಾಧ್ಯವಾಗುವಂತೆ ತಮ್ಮ ಅಧಿಕಾರಾವಧಿಯ ಮೊದಲ ಐದು ವರ್ಷಗಳಲ್ಲಿ ಹಲವು  ಪ್ರಮುಖ ಕಾನೂನು ಜಾರಿಗೊಳಿಸಿದ ಅವರು, ಈಗ ಆಸ್ತಿಗಳಿಗೂ 'ಆಧಾರ್ ಲಿಂಕ್ ಎಂಬ ಮತ್ತೊಂದು ದೈತ್ಯ ಆಯುಧ  ಪ್ರಯೋಗಿಸಲು ಮುಂದಾಗಿದ್ದಾರೆ. ಅಂದರೆ, ಎಲ್ಲಾ ಸ್ವತ್ತುಗಳನ್ನು ಆಧಾರ್ ನೊಂದಿಗೆ ಜೋಡಿಸುವುದು..! ವಿಶ್ವಾಸಾರ್ಹ ಮೂಲಗಳ ಪ್ರಕಾರ, ಈ ಸಂಬಂಧ ಕೇಂದ್ರ ಸರ್ಕಾರ ರೂಪಿಸುತ್ತಿರುವ ವಿಧೇಯಕ ಅಂತಿಮ ಹಂತದಲ್ಲಿದೆ. ಕಪ್ಪು ಹಣ ನಗದು ರೂಪದಲ್ಲಿರದೆ. ಹೂಡಿಕೆಯಾಗಿ ಬದಲಾಗುತ್ತಾ ರಿಯಲ್ಎಸ್ಟೇಟ್ ಕ್ಷೇತ್ರಕ್ಕೆ ಪ್ರವಹಿಸುತ್ತಿದೆ. ದೇಶಾದ್ಯಂತ ಇದೇ ರೀತಿಯ ಪರಿಸ್ಥಿತಿಯಿದ್ದು, ಇದರಿಂದ ನಿವೇಶನ, ಮನೆಗಳ ಬೆಲೆಗಳ ಗಗನಕ್ಕೇರುತ್ತಿವೆ. ಇದರಿಂದ  ಬಡವರು,ಮಧ್ಯಮ ವರ್ಗದವವರು  ನಿವೇಶನ  ಮನೆ ಖರೀದಿಸಲು ಸಾಧ್ಯವಾಗತಂತಹ  ಪರಿಸ್ಥಿತಿ  ಕಾರಣವಾಗುತ್ತಿದೆ. 

ಈ ಎರಡು ಸಮಸ್ಯೆಗಳಗೆ  ಏಕಕಾಲದಲ್ಲಿ  ಬಗೆಹರಿಸಿ  ಪರಿಹಾರ ರೂಪಿಸಲು    ಪ್ರಧಾನಿ  ನರೇಂದ್ರ ಮೋದಿ  ಸರ್ಕಾರ ಕ್ರಮಗಳನ್ನು ಪ್ರಾರಂಭಿಸಿದೆ. ಇದರಿಂದ ಕಪ್ಪು ಹಣ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ   ಹರಿದುಬಂದು  ಕೈಗಳಿಂದ ಕೈಗಳಿಗೆ  ಬದಲಾಗುವುದಕ್ಕೆ ತಡೆಯೊಡ್ಡಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

SCROLL FOR NEXT