ದೇಶ

ನಮಗೆ ಸಾಕಷ್ಟು ಶಾಸಕರ ಬೆಂಬಲವಿದೆ, ಸರ್ಕಾರ ರಚಿಸಲು ಅವಕಾಶ ಕೊಡಿ: ರಾಜ್ಯಪಾಲರಿಗೆ 'ಮಹಾ ವಿಕಾಸ್ ಅಘಾಡಿ' ಪತ್ರ

Sumana Upadhyaya

ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಪತ್ರ ಸಲ್ಲಿಸಿದ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನಾಯಕರು ತಮಗೆ ಸರ್ಕಾರ ರಚಿಸಲು ಸಾಕಷ್ಟು ಶಾಸಕರ ಬೆಂಬಲವಿದೆ ಎಂದು ಪ್ರತಿಪಾದಿಸಿದ್ದಾರೆ.


ಪತ್ರಕ್ಕೆ ಮೂರೂ ಪಕ್ಷಗಳ ಅಧ್ಯಕ್ಷರುಗಳಾದ ಏಕಾಂತ್ ಶಿಂಧೆ, ಜಯಂತ್ ಪಾಟೀಲ್ ಮತ್ತು ಬಾಳಾ ಸಾಹೇಬ್ ತೊರಟ್ ಸಹಿ ಹಾಕಿದ್ದಾರೆ. ಮೂರೂ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡ ಮಹಾ ವಿಕಾಸ್ ಅಘಾಡಿಗೆ ಬಹುಮತವಿದ್ದು ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿಕೊಂಡ ದೇವೇಂದ್ರ ಫಡ್ನವಿಸ್ ಅವರಿಗೆ ಸಾಕಷ್ಟು ಬಹುಮತವಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.


ಶಿವಸೇನೆಗೆ ಬೆಂಬಲ ನೀಡಿರುವ ಎನ್ ಸಿಪಿ ಮತ್ತು ಕಾಂಗ್ರೆಸ್ ಶಾಸಕರ ಬೆಂಬಲ ಪತ್ರ ಜೊತೆಗೆ ಸಣ್ಣ ಪಕ್ಷಗಳ, ಸ್ವತಂತ್ರ ಶಾಸಕರ ಬೆಂಬಲ ಇರುವುದರಿಂದ ತಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

SCROLL FOR NEXT