ದೇಶ

ಕೈ ಕೊಟ್ಟ ಅಜಿತ್ ಪವಾರ್, ದೇವೇಂದ್ರ ಫಡ್ನವಿಸ್ ಹೇಳಿದ್ದೇನು? 

Sumana Upadhyaya

ಮುಂಬೈ: ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ನಂಬಿ ಅವರ ಜೊತೆ ಕೈಜೋಡಿಸಿದ್ದು ತಪ್ಪಿನ ನಿರ್ಧಾರವೇ ಎಂಬ ಪ್ರಶ್ನೆಗೆ ಮಹಾರಾಷ್ಟ್ರ ಉಸ್ತುವಾರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉತ್ತರಿಸಲು ನಿರಾಕರಿಸಿದ್ದಾರೆ. 


ನೀವು ಚಿಂತಿಸಬೇಡಿ ಎಲ್ಲವನ್ನೂ ನಿಮಗೆ ಹೇಳುತ್ತೇನೆ,  ಸರಿಯಾದ ಸಮಯ, ಸಂದರ್ಭ ನೋಡಿಕೊಂಡು ಎಲ್ಲವನ್ನೂ ವಿವರಿಸುತ್ತೇನೆ ಎಂದು ಫಡ್ನವಿಸ್ ಸುದ್ದಿಗಾರರಿಗೆ ಇಂದು ಪ್ರತಿಕ್ರಿಯಿಸಿದರು.


ಅಜಿತ್ ಪವಾರ್ ಅವರು ರಾಜೀನಾಮೆ ನೀಡಿದ ಬಗ್ಗೆ ಮುಂಬೈಯಲ್ಲಿ ಪ್ರತಿಕ್ರಿಯೆ ನೀಡಿದ ಎನ್ ಸಿಪಿ ನಾಯಕ ನವಾಬ್ ಮಲಿಕ್, ಶರದ್ ಪವಾರ್ ಅಜಿತ್ ಪವಾರ್ ಅವರನ್ನು ಕ್ಷಮಿಸಿದ್ದಾರೆ. ಕೊನೆಗೂ ಅಜಿತ್ ಪವಾರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದು ಕುಟುಂಬದ ವಿಷಯವಾಗಿದ್ದು ಶರದ್ ಪವಾರ್ ಅವರನ್ನು ಕ್ಷಮಿಸಿದ್ದಾರೆ. ಅಜಿತ್ ಪವಾರ್ ಎನ್ ಸಿಪಿಯಲ್ಲಿಯೇ ಇದ್ದು ಅವರ ಸ್ಥಾನಮಾನ ಬದಲಾಗಿಲ್ಲ ಎಂದರು.


ಪ್ರಮಾಣವಚನ ಸ್ವೀಕರಿಸಿ ಮೂರೇ ದಿನಕ್ಕೆ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

SCROLL FOR NEXT