ದೇಶ

ಲಾಲ್ ಬಹಾದುರ್ ಶಾಸ್ತ್ರೀ ಜಯಂತಿ: ಗಣ್ಯರಿಂದ ಗೌರವ ನಮನ 

Sumana Upadhyaya

ನವದೆಹಲಿ: ಬುಧವಾರ ಭಾರತದ ಎರಡನೇ ಪ್ರಧಾನಿ ದಿವಂಗತ ಲಾಲ್ ಬಹಾದುರ್ ಶಾಸ್ತ್ರೀ ಅವರ 115ನೇ ಜಯಂತಿ.
ಅವರ ಪುತ್ರ ಅನಿಲ್ ಶಾಸ್ತ್ರಿ ಮತ್ತು ಕುಟುಂಬಸ್ಥರು ದೆಹಲಿಯ ವಿಜಯ್ ಘಾಟ್ ನಲ್ಲಿರುವ ಶಾಸ್ತ್ರಿ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದರು. 


ಪ್ರಧಾನಿ ನರೇಂದ್ರ ಮೋದಿ ವಿಜಯ್ ಘಾಟ್ ಗೆ ತೆರಳಿ ಶಾಸ್ತ್ರಿಯವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಸಹ ವಿಜಯ್ ಘಾಟ್ ಗೆ ತೆರಳಿ ಹಿರಿಯ ನಾಯಕನನ್ನು ಸ್ಮರಿಸಿದ್ದಾರೆ.
 

SCROLL FOR NEXT