ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ 
ದೇಶ

ಬಾಂಗ್ಲಾ ಪ್ರಧಾನಿಗೂ ತಟ್ಟಿದ ಈರುಳ್ಳಿ ಬೆಲೆ ಬಿಸಿ, ಅಡುಗೆಯವರಿಗೆ ಈರುಳ್ಳಿ ಹಾಕಬೇಡಿ ಎಂದರಂತೆ ಶೇಖ್ ಹಸೀನಾ!

ಸತತ ಮಳೆಯಿಂದಾಗಿ ಈರುಳ್ಳಿ ಬೆಲೆ ನಾಶವಾಗಿ ಉತ್ಪಾದನೆಯಲ್ಲಿ ಕುಂಠಿತವಾಗಿರುವುದರಿಂದ ಭಾರತ ಕಳೆದ ತಿಂಗಳು ಈರುಳ್ಳಿ ರಫ್ತು ಮಾಡುವುದಕ್ಕೆ ನಿಷೇಧ ಹೇರಿತ್ತು. ಇದರಿಂದ ಸಹಜವಾಗಿ ಭಾರತ ದೇಶದ ಈರುಳ್ಳಿಯನ್ನು ನಂಬಿಕೊಂಡಿರುವ ಹೊರದೇಶಗಳಿಗೆ ಇದರ ಬಿಸಿ ತಟ್ಟಿದೆ.  

ನವದೆಹಲಿ: ದೇಶದಲ್ಲಿ ಈರುಳ್ಳಿ ಹೆಚ್ಚು ಬೆಳೆಯುವ ರಾಜ್ಯಗಳಲ್ಲಿ ಸತತ ಮಳೆಯಿಂದಾಗಿ ಬೆಳೆ ನಾಶವಾಗಿ ಉತ್ಪಾದನೆಯಲ್ಲಿ ಕುಂಠಿತವಾಗಿರುವುದರಿಂದ ಭಾರತ ಕಳೆದ ತಿಂಗಳು ಈರುಳ್ಳಿ ರಫ್ತು ಮಾಡುವುದಕ್ಕೆ ನಿಷೇಧ ಹೇರಿತ್ತು. ಇದರಿಂದ ಸಹಜವಾಗಿ ಭಾರತ ದೇಶದ ಈರುಳ್ಳಿಯನ್ನು ನಂಬಿಕೊಂಡಿರುವ ಹೊರದೇಶಗಳಿಗೆ ಇದರ ಬಿಸಿ ತಟ್ಟಿದೆ. 


ಇದಕ್ಕೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ನಿನ್ನೆ ದೆಹಲಿಯಲ್ಲಿ ತಮಾಷೆಯಾಗಿ ಮಾತನಾಡಿ ತಮಗೆ ಸಹ ಈರುಳ್ಳಿ ಕೊರತೆಯ ಬಿಸಿ ತಟ್ಟಿದೆ ಎಂದು ತೋರಿಸಿಕೊಟ್ಟಿದ್ದಾರೆ. ದೆಹಲಿಯಲ್ಲಿ ನಿನ್ನೆ ಭಾರತ-ಬಾಂಗ್ಲಾದೇಶ ಉದ್ಯಮ ವೇದಿಕೆ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಶೇಖ್ ಹಸೀನಾ, ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ಬಗ್ಗೆ ನಮಗೆ ಮೊದಲೇ ತಿಳಿಸಲಿಲ್ಲ ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.


ನಮ್ಮ ದೇಶದಲ್ಲಿ ನಮಗೆ ಈರುಳ್ಳಿ ಸಿಗುವುದು ಕಷ್ಟವಾಗಿದೆ. ನೀವ್ಯಾಕೆ ಪೂರೈಕೆ ಮಾಡುವುದು ನಿಲ್ಲಿಸಿದ್ದೀರಿ, ನಾನು ನಮ್ಮನೆಯ ಅಡುಗೆಯವರಿಗೆ ಈರುಳ್ಳಿ ಹಾಕದೆ ಅಡುಗೆ ಮಾಡಿ ಎಂದು ಹೇಳಿದ್ದೇನೆ ಎಂದಾಗ ಅಲ್ಲಿ ನೆರೆದಿದ್ದವರು ನಗೆಗಡಲಲ್ಲಿ ತೇಲಿದರು. 

ಭಾರತ ಸರ್ಕಾರ ಮೊದಲೇ ಮುನ್ಸೂಚನೆ ನೀಡಿ ಈರುಳ್ಳಿ ರಫ್ತನ್ನು ನಿಲ್ಲಿಸಬೇಕಾಗಿತ್ತು. ಹಠಾತ್ತಾಗಿ ನಿಲ್ಲಿಸಿದ್ದರಿಂದ ಕಷ್ಟವಾಗಿದೆ. ಮುಂದಿನ ಸಾರಿ ಹೀಗೆ ಮಾಡುವಾಗ ಮೊದಲೇ ಸೂಚನೆ ನೀಡಿ ಮಾಡಿ ಎಂದರು ಶೇಖ್ ಹಸೀನಾ. 

ಕಳೆದ ತಿಂಗಳು ಸೆಪ್ಟೆಂಬರ್ 29ರಂದು ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿಗೆ ನಿಷೇಧ ಹೇರಿತ್ತು. 1 ಕ್ವಿಂಟಾಲ್ ಈರುಳ್ಳಿಗೆ 4 ಸಾವಿರದ 500 ರೂಪಾಯಿಗೆ ಏರಿಕೆಯಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

 
ಭಾರತದಿಂದ ಈರುಳ್ಳಿ ರಫ್ತು ನಿಲ್ಲಿಸಿರುವುದರಿಂದ ಬಾಂಗ್ಲಾದೇಶದಲ್ಲಿ ತೀವ್ರ ತೊಂದರೆಯಾಗಿದ್ದು ರಾಜಧಾನಿ ಢಾಕಾದಲ್ಲಿ 1 ಕ್ವಿಂಟಾಲ್ ಈರುಳ್ಳಿಗೆ 10 ಸಾವಿರ ರೂಪಾಯಿ ಗಡಿ ದಾಟಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT