ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ 
ದೇಶ

ನಾವು ಭಾರತ್ ಮಾತಾ ಕಿ ಜೈ ಎಂದರೆ, ಕಾಂಗ್ರೆಸ್ಸಿಗರು ಸೋನಿಯಾ ಮಾತಾ ಕಿ ಜೈ ಎನ್ನುತ್ತಾರೆ: ಹರಿಯಾಣ ಸಿಎಂ

ನಾವು ಭಾರತ್ ಮಾತಾ ಕಿ ಜೈ ಎಂದರೆ, ಕೆಲ ಕಾಂಗ್ರೆಸ್ಸಿನಲ್ಲಿರುವವರು ಸೋನಿಯಾ ಮಾತಾ ಕಿ ಜೈ ಎನ್ನುತ್ತಾರೆಂದು ಕಾಂಗ್ರೆಸ್ ವಿರುದ್ಧ ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ. 

ಚಂಡೀಗಢ: ನಾವು ಭಾರತ್ ಮಾತಾ ಕಿ ಜೈ ಎಂದರೆ, ಕೆಲ ಕಾಂಗ್ರೆಸ್ಸಿನಲ್ಲಿರುವವರು ಸೋನಿಯಾ ಮಾತಾ ಕಿ ಜೈ ಎನ್ನುತ್ತಾರೆಂದು ಕಾಂಗ್ರೆಸ್ ವಿರುದ್ಧ ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ. 

ಅಬಾಲಾ ಜಿಲ್ಲೆಯ ನಿರ್ಯಾಂಗರ್ಹ್ ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಪ್ರಾಮುಖ್ಯತೆ ಮೊದಲು ಯಾವುದಕ್ಕೆ ನೀಡಬೇಕೆಂದು ಕೇಳಿದರೆ, ನಾವೆಲ್ಲರೂ ದೇಶ ಮೊದಲು ಎನ್ನುತ್ತೇವೆ. ಆದರೆ, ಕಾಂಗ್ರೆಸ್ಸಿನಲ್ಲಿರುವವರು ನಮ್ಮ ನಾಯಕರು ಮೊದಲು ಎನ್ನುತ್ತಾರೆ. ನಾವು ಭಾರತ್ ಮಾತಾ ಕಿ ಜೈ ಎಂದರೆ, ಕಾಂಗ್ರೆಸ್ಸಿನಲ್ಲಿರುವ ಕೆಲವರು ಸೋನಿಯಾ ಮಾತಾ ಕಿ ಜೈ ಎನ್ನುತ್ತಾರೆಂದು ಹೇಳಿದ್ದಾರೆ. 

ಕಾಂಗ್ರೆಸ್ಸಿನಲ್ಲಿರುವ ಕೆಲವರ ಮನಸ್ಥಿತಿ ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋವೊಂದೇ ಹೇಳುತ್ತದೆ. ಗುರ್ಗಾಂವ್ ನಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು, ಗುರ್ಗಾಂವ್ ಇನ್ನುಮಂದೆ ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ, ಕೇವಲ ಸೋನಿಯಾ ಮಾತಾ ಕಿ ಜೈ ಎಂದಷ್ಟೇ ಹೇಳುತ್ತಾರೆಂದು ಹೇಳಿದ್ದಾರೆಂದು ಟೀಕಿಸಿದ್ದಾರೆ. 

ಇದೀಗ ಆ ವಿಡಿಯೋ ನಕಲಿ ಎಂದು ಕಾಂಗ್ರೆಸ್ ಹೇಳುವಂತಿಲ್ಲ. ಏಕೆಂದರೆ ಅದರಿಂದ ಸೋನಿಯಾ ಅವರಿಗೆ ಮುಜುಗರವನ್ನುಂಟು ಮಾಡುತ್ತದೆ. ವಿಡಿಯೋ ಅಧಿಕೃತವಾದದ್ದು ಎಂದರೆ, ಸಾರ್ವಜನಿಕರು ಕೆಂಡಾಮಂಡಲಗೊಳ್ಳುತ್ತಾರೆ. ಗಾಂಧಿ-ನೆಹರು ಕುಟುಂಬ ಬಿಟ್ಟು ಕಾಂಗ್ರೆಸ್ ಹೊರಗಿನದ್ದನ್ನು ನೋಡುವುದಿಲ್ಲ. ಲೋಕಸಭಾ ಚುನಾವಣೆ ಬಳಿಕ ರಾಹುಲ್ ಗಾಂಧಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದು ಹೇಳಿದ್ದಾರೆ. ಖಾಲಿಯಿರುವ ಅಧ್ಯಕ್ಷ ಸ್ಥಾನಕ್ಕೆ ಹೊರಗಿನವರನ್ನು ಆಯ್ಕೆ ಮಾಡುತ್ತೇವೆಂದು ಹೇಳಿದ್ದಾರೆ. ರಾಜೀನಾಮೆ ಕೊಟ್ಟು 2 ತಿಂಗಳಾದರೂ, ಇನ್ನೂ ಆ ಸ್ಥಾನಕ್ಕೆ ಯಾರನ್ನು ನೇಮಿಸಿಲ್ಲ. ಹೊರಗಿನವರನ್ನು ನೇಮಿಸಲು ಸಾಧ್ಯವಾಗದೆ, ಸೋನಿಯಾ ಗಾಂಧಿಯವರನ್ನೇ ಮತ್ತೆ ನೇಮಕ ಮಾಡಲಾಗಿದೆ ಎಂದಿದ್ದಾರೆ. 

ಇದೇ ವೇಳೆ ಪ್ರಧಾನಿ ಮೋದಿಯವರನ್ನು ಕೊಂಡಾಡಿರುವ ಖಟ್ಟರ್ ಅವರು, ದೇಶದ ವರ್ಚಸ್ಸನ್ನು ಪ್ರಧಾನಿ ಮೋದಿ ಸರ್ಕಾರ ಇಡೀ ವಿಶ್ವದ ಎದುರು ಎತ್ತಿ ಹಿಡಿದಿದೆ. ದೇಶದ ವರ್ಚಸ್ಸು ಹೆಚ್ಚಿದೆ. ಹ್ಯೂಸ್ಟನ್ ನಲ್ಲಿ ನಡೆದ ಹೌಡಿ ಮೋದಿಯಲ್ಲಿ ಇದನ್ನು ಕಾಣಬಹುದು. ದೊಡ್ಡ ದೊಡ್ಡ ರಾಷ್ಟ್ರದವರು ಪ್ರಧಾನಿ ಮೋದಿಯವರನ್ನು ಭೇಟಿಯಾದರು. ಅವರ ನೀತಿ ಹಾಗೂ ಯೋಜನೆಗಳ ಕುರಿತು ಸಲಹೆ ಪಡೆದುಕೊಂಡಿದ್ದಾರೆ. ಇದೀಗ ಮೋದಿ ವಿಶ್ವದ ಟಾಪ್ ನಾಯಕರಲ್ಲಿ ಒಬ್ಬರಾಗಿದ್ದಾರೆ. ಯಾರಿಗೂ ಗೌರವ ನೀಡದ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿಗೆ ನೀಡಿದ್ದಾರೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT