ಸಾಂದರ್ಭಿಕ ಚಿತ್ರ 
ದೇಶ

ದೆಹಲಿ - ಕಾಬುಲ್ ಸ್ಪೈಸ್ ಜೆಟ್‌ ವಿಮಾನ ಸುತ್ತುವರಿದಿದ್ದ ಪಾಕ್‌ ಎಫ್‌-16, ಆತಂಕಗೊಂಡಿದ್ದ ಪ್ರಯಾಣಿಕರು!

ಕಳೆದ ಫೆಬ್ರವರಿಯಲ್ಲಿ ನಡೆದ ಬಾಲಕೋಟ್ ವಾಯುದಾಳಿ ನಂತರ ಭಾರತ - ಪಾಕಿಸ್ತಾನ ನಡುವೆ ಯುದ್ಧೋನ್ಮಾದ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ದೆಹಲಿಯಿಂದ ಕಾಬುಲ್‌ಗೆ ತೆರಳುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನವನ್ನು ಪಾಕಿಸ್ತಾನ ವಾಯುಪಡೆಯ ಎರಡು ಎಫ್‌-16 ಯುದ್ಧ ವಿಮಾನಗಳು ಸುತ್ತುವರೆದಿದ್ದವು.

ನವದೆಹಲಿ: ಕಳೆದ ಫೆಬ್ರವರಿಯಲ್ಲಿ ನಡೆದ ಬಾಲಕೋಟ್ ವಾಯುದಾಳಿ ನಂತರ ಭಾರತ - ಪಾಕಿಸ್ತಾನ ನಡುವೆ ಯುದ್ಧೋನ್ಮಾದ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ದೆಹಲಿಯಿಂದ ಕಾಬುಲ್‌ಗೆ ತೆರಳುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನವನ್ನು ಪಾಕಿಸ್ತಾನ ವಾಯುಪಡೆಯ ಎರಡು ಎಫ್‌-16 ಯುದ್ಧ ವಿಮಾನಗಳು ಸುತ್ತುವರೆದಿದ್ದವು. ಇದರಿಂದ ವಿಮಾನದಲ್ಲಿದ್ದ ಸುಮಾರು 120 ಪ್ರಯಾಣಿಕರು ತೀವ್ರ ಆತಂಕಗೊಂಡಿದ್ದರು.

ಕಳೆದ ಸೆಪ್ಟೆಂಬರ್ 23ರಂದು ಈ ಘಟನೆ ನಡೆದಿದ್ದು, ಕಾಬುಲ್‌ಗೆ ತೆರಳುತ್ತಿದ್ದ ಎಸ್‌ಜಿ-21 ಸ್ಪೈಸ್ ಜೆಟ್ ವಿಮಾನ ಪಾಕಿಸ್ತಾನ ವಾಯು ಮಾರ್ಗದಲ್ಲಿತ್ತು ಎಂದು ತಿಳಿದು ಬಂದಿದೆ. ಪಾಕಿಸ್ತಾನ ಎಟಿಸಿ (ಏರ್‌ ಟ್ರಾಫಿಕ್‌ ಕಂಟ್ರೋಲ್‌)ನಲ್ಲಾದ ಗೊಂದಲದಿಂದ ವಾಯುಮಾರ್ಗದಲ್ಲಿ ಈ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಪಾಕಿಸ್ತಾನದ ವಾಯು ಮಾರ್ಗ ಭಾರತಕ್ಕೆ ಬಂದ್ ಮಾಡಿ ಆದೇಶ ಹೊರಡಿಸಿರಲಿಲ್ಲ. ಆದರೆ ಪಾಕಿಸ್ತಾನದ ಎಟಿಸಿಯಲ್ಲಿ ಸ್ಪೈಸ್‌ ಜೆಟ್‌ ವಿಮಾನದ ಕೋಡ್‌ ಎಸ್‌ಜಿ ಬದಲಾಗಿ ಐಎ(ಇಂಡಿಯನ್ ಏರ್‌ಫೋರ್ಸ್‌ ಅಥವಾ ಇಂಡಿಯನ್‌ ಆರ್ಮಿ) ಎಂದು ತಪ್ಪಾಗಿ ಗ್ರಹಿಸಲಾಗಿದೆ. ಹೀಗಾಗಿ ಎಟಿಸಿ ತಕ್ಷಣ ಭಾರತೀಯ ವಾಯುಸೇನೆಯ ವಿಮಾನವೊಂದು ಪಾಕ್‌ ವಲಯದಲ್ಲಿ ಸಂಚರಿಸುತ್ತಿದೆ ಎಂದು ಪಾಕ್‌ ರಕ್ಷಣಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪಾಕ್‌ ವಾಯುಪಡೆಯ ಎರಡು ಎಫ್‌-16 ಕಳುಹಿಸಿದೆ.

ಸ್ಪೈಸ್‌ ಜೆಟ್‌ ಪೈಲಟ್‌ಗಳಲ್ಲಿ ವಾಯು ಮಾರ್ಗದ ಅಲ್ಟಿಟ್ಯೂಡ್‌ ತಕ್ಷಣ ಕಡಿಮೆಗೊಳಿಸುವಂತೆ ಎಫ್‌-16 ಪೈಲಟ್‌ಗಳು ಸೂಚನೆ ನೀಡಿದ್ದಾರೆ. ಈ ವೇಳೆ ಸ್ಪೈಸ್‌ಜೆಟ್‌ ಪೈಲಟ್‌ ಇದು ಭಾರತೀಯ ಪ್ರಯಾಣಿಕರ ವಿಮಾನ ಸಂಸ್ಥೆ ಎಂಬುದನ್ನು ಮನದಟ್ಟು ಮಾಡಿದ್ದಾರೆ.

ವಿಮಾನದಲ್ಲಿ ಸಾಮಾನ್ಯ ಪ್ರಯಾಣಿಕರು ಇರುವುದನ್ನು ಖಚಿತ ಪಡಿಸಿದ ಬಳಿಕ ಈ ಗೊಂದಲ ಬಗೆ ಹರಿದಿದೆ. ಅಫಘಾನಿಸ್ತಾನದ ವಾಯುಗಡಿ ವರೆಗೆ ಎಫ್‌-16 ಯುದ್ಧ ವಿಮಾನಗಳು ಸ್ಪೈಸ್‌ ಜೆಟ್‌ ವಿಮಾನದ ಹಿಂಬಾಲಿಸಿ, ಮತ್ತೆ ತೆರಳಿದೆ ಎಂದು ಡಿಜಿಸಿಎ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ