ದೇಶ

ಭಾರೀ ಮಳೆ ನಡುವೆಯೂ ಪ್ರಚಾರ ಮುಂದುವರೆಸಿದ ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್

Manjula VN

ಮಳೆ ಮೂಲಕ ದೇವರು ನಮಗೆ ಆಶೀರ್ವಾದ ನೀಡುತ್ತಿದ್ದಾರೆ: ಶರದ್ ಪವಾರ್


ಸತಾರ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ರಾಜಕಾರಣಿಗಳ ಹುಮ್ಮಸ್ಸನ್ನು ಕುಗ್ಗಿಸುವಲ್ಲಿ ಮಳೆ ಕೂಡ ವಿಫಲವಾಗಿದೆ. ಭಾರಿ ಮಳೆಯ ನಡುವೆಯೂ ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಭಾಷಣ ಮಾಡಿರುವ ವಿಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ. 

ಮಹಾರಾಷ್ಟ್ರ ಸತಾರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಶರದ್ ಪವಾರ್ ಅವರು ಭಾಷಣ ಮಾಡುತ್ತಿದ್ದ ವೇಳೆ ಭಾರೀ ಮಳೆ ಸುರಿದಿದೆ. ಈ ಸಂದರ್ಭದಲ್ಲಿಯೂ ಭಾಷಣ ಮುಂದುವರೆಸಿರುವ ಪವಾರ್ ಅವರು, ದೇವರು ಮಳೆ ಮೂಲಕ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ. ಸತಾರ ಜಿಲ್ಲೆಯಲ್ಲಿ ನಮ್ಮ ಪಕ್ಷ ಪವಾಡ ಮಾಡಲಿದೆ ಎಂದು ಹೇಳಿದ್ದಾರೆ. 

ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳಬೇಕು. ನಾನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ಆಯ್ಕೆ ವೇಳೆ ತಪ್ಪು ಮಾಡಿದೆ. ಇದನ್ನು ನಾನು ಸಾರ್ವಜನಿಕವಾಗಿ ಒಪ್ಪುಕೊಳ್ಳುತ್ತೇನೆ. ಆದರೆ, ಆ ತಪ್ಪನ್ನು ಸರಿಪಡಿಸಿಕೊಳ್ಳಲು ನನಗೆ ಸಂತವಿದೆ. ಸತಾರದ ಪ್ರತಿಯೊಬ್ಬ ಯುವಕ ಹಾಗೂ ವಯೋವೃದ್ಧರು ಅ.21ರ ಚುನಾವಣೆಗಾಗಿ ಕಾಯುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸತಾರದಲ್ಲಿ ಪವಾಡ ನಡೆಯಲಿದೆ ಎಂದು ತಿಳಿಸಿದ್ದಾರೆ. 

SCROLL FOR NEXT