ದೇಶ

ತೆಲಂಗಾಣ: ಮುಸ್ಲಿಂ ತಂದ ಆಹಾರ ಬೇಡ ಎಂದ ವ್ಯಕ್ತಿ ವಿರುದ್ಧ ಕೇಸು ದಾಖಲು!

Sumana Upadhyaya

ಹೈದರಾಬಾದ್: ಆನ್ ಲೈನ್ ನಲ್ಲಿ ಆಹಾರ ಪೂರೈಸಿದ ವ್ಯಕ್ತಿ ಮುಸ್ಲಿಂ ಎಂದು ತಿರಸ್ಕರಿಸಿದ ವ್ಯಕ್ತಿ ವಿರುದ್ಧ ದೂರು ದಾಖಲಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.


ಮುದಾಸೀರ್ ಎಂಬ ವ್ಯಕ್ತಿ ನೀಡಿದ ದೂರಿನಲ್ಲಿ, ಅಜಯ್ ಕುಮಾರ್ ಎಂಬುವವರು ಆನ್ ಲೈನ್ ನಲ್ಲಿ ಆಹಾರಕ್ಕೆ ಆರ್ಡರ್ ಮಾಡಿದ್ದರು. ತಮಗೆ ಹಿಂದೂ ವ್ಯಕ್ತಿಯೇ ಆಹಾರ ತಂದುಕೊಡಬೇಕೆಂದು ಸಹ ವಿಶೇಷವಾಗಿ ಕೇಳಿಕೊಂಡಿದ್ದರು. 


ಆದರೆ ಬೇರೆ ಹಿಂದೂ ಧರ್ಮದ ವ್ಯಕ್ತಿ ಇಲ್ಲದ್ದರಿಂದ ಮುದಾಸೀರ್ ಅವರೇ ಅಜಯ್ ಕುಮಾರ್ ಮನೆಗೆ ಆಹಾರ ತಂದುಕೊಡಬೇಕಾಯಿತು. ಮನೆ ಬಾಗಿಲಿಗೆ ಆಹಾರದ ಡಬ್ಬ ತಂದ ಮುಡಸ್ಸಿರ್ ನನ್ನು ಅಜಯ್ ಕುಮಾರ್ ನಿರಾಕರಿಸಿ ಕಳುಹಿಸಿದ್ದಾರೆ.


ಇದರಿಂದ ಬೇಸತ್ತ ಮುದಾಸೀರ್ ಪೊಲೀಸರಿಗೆ ದೂರು ನೀಡಿದ್ದು ಅವರು ಭಾರತೀಯ ದಂಡ ಸಂಹಿತೆಯಡಿ ಸಂಬಂಧಪಟ್ಟ ಸೆಕ್ಷನ್ ನಡಿ ಕೇಸು ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

SCROLL FOR NEXT