ಗ್ರಾಮಸ್ಥರು ಶಿಕ್ಷಕನಿಗೆ ಹೊಡೆಯುತ್ತಿರುವುದು 
ದೇಶ

ಶಾಲಾ ಶೌಚಾಲಯದೊಳಗೆ ರಾಸಲೀಲೆ: ಶಿಕ್ಷಕನಿಗೆ ಗ್ರಾಮಸ್ಥರಿಂದ ಥಳಿತ

ಶಾಲೆಯ ಶೌಚಾಲಯದಲ್ಲಿ ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ  ಶಿಕ್ಷಕನನ್ನು  ಗ್ರಾಮಸ್ಥರೇ  ಹಿಡಿದು ಥಳಿಸಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆ  ಪುದುಚತ್ರಂ ಬಳಿಯ  ಎಸ್.ಉದುಂಬಮ್ ಎಂಬ ಗ್ರಾಮದಲ್ಲಿ ನಡೆದಿದೆ. 

ಚೆನ್ನೈ: ಶಾಲೆಯ ಶೌಚಾಲಯದಲ್ಲಿ ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ  ಶಿಕ್ಷಕನನ್ನು  ಗ್ರಾಮಸ್ಥರೇ  ಹಿಡಿದು ಥಳಿಸಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆ  ಪುದುಚತ್ರಂ ಬಳಿಯ  ಎಸ್.ಉದುಂಬಮ್ ಎಂಬ ಗ್ರಾಮದಲ್ಲಿ ನಡೆದಿದೆ.


ಶಾಲೆಯ  ಪಕ್ಕದಲ್ಲಿರುವ ಅಂಗನವಾಡಿಯಲ್ಲಿ  ಕೆಲಸ ಮಾಡುತ್ತಿದ್ದ ಮಹಿಳೆಯ  ಜತೆ   ಶಿಕ್ಷಕ ಸರವಣನ್  ಎಂಬುವರರು   ಅಕ್ರಮ ಸಂಬಂಧ ಇರಿಸಿಕೊಂಡಿದ್ದು,   ಆತ ಕಳೆದ ಕೆಲವು ತಿಂಗಳುಗಳಿಂದ ಶಾಲೆಯ ಶೌಚಾಲಯದಲ್ಲಿ  ಆಕೆಯೊಂದಿಗೆ ರಾಸಲೀಲೆಯಲ್ಲಿ ತೊಡಗುತ್ತಿದ್ದ.  ಇದನ್ನು ಗಮನಿಸಿದ ವಿದ್ಯಾರ್ಥಿಗಳು  ವಿಷಯವನ್ನು ಪೋಷಕರಿಗೆ ತಿಳಿಸಿದ್ದರು.


ಮಂಗಳವಾರ ಬೆಳಿಗ್ಗೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಶಾಲೆಯ ಬಳಿ ಜಮಾಯಿಸಿ,  ಶಿಕ್ಷಕ  ಸರವಣನ್ ನನ್ನು ಹಿಡಿದು ಮಹಿಳೆಯೊಂದಿಗಿನ ಅಕ್ರಮ ಸಂಬಂಧ ವಿಷಯ ಪ್ರಸ್ತಾಪಿಸಿ, ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಮಹಿಳೆಯರು  ಶಿಕ್ಷಕನಿಗೆ ಚಪ್ಪಲಿ ಹಾಗೂ ಪೊರಕೆಯಿಂದ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದರು.   


ಈ ವಿಷಯ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಜಯರಾಜ್  ಮಾತನಾಡಿ,  "ಎರಡು ತಿಂಗಳ ಹಿಂದೆ   ಇದೇ ರೀತಿ  ಸರವಣನ್ ಅವರು ಮಹಿಳೆಯೊಂದಿಗೆ  ಶಾಲೆಯ ಶೌಚಾಲಯಲ್ಲಿರುವ ಮಾಹಿತಿ ತಿಳಿಯಿತು. ಕೂಡಲೇ     ಅಲ್ಲಿಗೆ ತೆರಳಿದಾಗ  ಶೌಚಾಲಯದ  ಬೀಗ ಹಾಕಲಾಗಿತ್ತು.  ಶೌಚಾಲಯ  ಬೀಗ ತೆಗೆದು ಒಳಗೆ ನೋಡಿದಾಗ  ಮಹಿಳೆ   ಒಳಗೆ ಇದ್ದಳು. ನಂತರ  ಸರವಣನ್ ಅವರಿಗೆ ಎಚ್ಚರಿಕೆ ನೀಡಿದ್ದೆ  ಎಂದು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ