ದೇಶ

ಸಹೋದರನ ಸಾವಿಗೆ ರಜೆ ನೀಡದ ಅಧಿಕಾರಿ: ಸಿಟ್ಟಿಗೆದ್ದ ಪೇದೆಯಿಂದ ಮನಬಂದಂತೆ ಗುಂಡಿನ ದಾಳಿ

Manjula VN

ರಾಂಚಿ: ತನ್ನ ಸಹೋದರ ಮೃತಪಟ್ಟಿದ್ದರೂ ರಜೆ ನೀಡಲು ಅಧಿಕಾರಿಗಳು ಒಪ್ಪದ ಹಿನ್ನೆಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡ ಪೇದೆಯೊಬ್ಬ ಕುಡಿದು ಬಂದು ಪೊಲೀಸ್ ಕಚೇರಿ ಎದುರು ಮನಬಂದಂತೆ ಗುಂಡಿನ ದಾಳಿ ನಡೆಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ. 

ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದಲೂ ರಜೆ ನೀಡುವಂತೆ ಪೇದೆ ಸುನೀಲ್ ಕಾಕಾ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು ರಜೆ ನೀಡಲು ನಿರಾಕರಿಸಿದ ಹಿನ್ನಲೆಯಲ್ಲಿ ತೀವ್ರವಾಗಿ ಬೇಸರಗೊಂಡಿರುವ ಸುನೀರ್ ಅವರು ಕಂಠ ಪೂರ್ತಿ ಕುಡಿದು ಬಂದು ಸಾರ್ಜೆಂಟ್ ಮೇಜರ್ ಕಚೇರಿ ಮುಂದೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. 

ಕಾಕಾ ಕಳೆದ 7 ತಿಂಗಳಿಂದಲೂ ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ವೇತನವನ್ನು ನೀಡಲಾಗುತ್ತಿರಲಿಲ್ಲ. ಬೇಜವಾಬ್ದಾರಿಯುತ ವರ್ತನೆ ಹಿನ್ನಲೆಯಲ್ಲಿ ರಜೆ ಮನವಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು ಎಂದು ವರದಿಗಳು ತಿಳಿಸಿವೆ. 

SCROLL FOR NEXT