ದೇಶ

ಉತ್ತರಾಖಂಡ್: 40 ಬಿಜೆಪಿ ನಾಯಕರ ಉಚ್ಚಾಟನೆ! 

Srinivas Rao BV

ಡೆಹ್ರಾಡೂನ್: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡ್ ನ ಬಿಜೆಪಿ 40 ಸದಸ್ಯರನ್ನು ಉಚ್ಚಾಟನೆ ಮಾಡಿದೆ. 

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿ ಈ ಕ್ರಮ ಕೈಗೊಂಡಿದೆ. ರಜನೀಶ್ ಶರ್ಮಾ, ಮೀರಾ ರತುರಿ, ಮೋಹನ್ ಸಿಂಗ್ ಬಿಶ್ತ್, ಮಹೇಶ್ ಬಾಗ್ರಿ, ಪ್ರಮೀಲಾ ಯುನಿಯಲ್, ಭವನ್ ಸಿಂಗ್ ಉಚ್ಚಾಟನೆಗೊಂಡಿರುವ ಪ್ರಮುಖ ಸದಸ್ಯರಾಗಿದ್ದಾರೆ. 

ಜುಲೈ ತಿಂಗಳಲ್ಲಿ ಉತ್ತರಾಖಂಡ್ ನ ಶಾಸಕ ಕುನ್ವರ್ ಪ್ರಣವ್ ಸಿಂಗ್ ನ್ನು ರಿವಾಲ್ವರ್‌ ಹಿಡಿದು ನೃತ್ಯ ಮಾಡಿದ್ದಕ್ಕಾಗಿ ಉಚ್ಚಾಟನೆಗೊಳಿಸಿತ್ತು. 

ಈಗ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಜನಪ್ರತಿನಿಧಿಗಳೊಂದಿಗೆ ನಡೆಸಿದ್ದ ಮಹತ್ವದ ಸಭೆಯ ಒಂದು ತಿಂಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

SCROLL FOR NEXT