ಮಮತಾ ಬ್ಯಾನರ್ಜಿ 
ದೇಶ

ಕೊರೋನಾ ಸಂಕಷ್ಟದಲ್ಲೂ ರಾಜಕೀಯ ಮೇಲಾಟ: ಸಂವಿಧಾನದ ಪ್ರಾಥಮಿಕ ಜ್ಞಾನವೂ ಇಲ್ಲ; ದೀದಿ ವಿರುದ್ಧ ಗವರ್ನರ್ ಗರಂ

ನಾನು ಚುನಾಯಿತ ಮುಖ್ಯಮಂತ್ರಿ, ನೀವು ನಾಮ ನಿರ್ದೇಶಿತ ರಾಜ್ಯಪಾಲರು ಎಂದು ಮಮತಾ ಬ್ಯಾನರ್ಜಿ ಬರೆದಿರುವ 5 ಪುಟಗಳ ಪತ್ರಕ್ಕೆ ರಾಜ್ಯಪಾಲ ಜಗದೀಪ್ ಧನಕರ್ ಪ್ರತ್ಯುತ್ತರ ನೀಡಿದ್ದಾರೆ.

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಕೊರೊನಾ ಬಿಕ್ಕಟ್ಟಿನ ವಿಷಯದಲ್ಲಿಯೂ ರಾಜಕೀಯ ಮೇಲಾಟ ಮುಂದುವರಿದಿದೆ.

ನಾನು ಚುನಾಯಿತ ಮುಖ್ಯಮಂತ್ರಿ, ನೀವು ನಾಮ ನಿರ್ದೇಶಿತ ರಾಜ್ಯಪಾಲರು ಎಂದು ಮಮತಾ ಬ್ಯಾನರ್ಜಿ ಬರೆದಿರುವ 5 ಪುಟಗಳ ಪತ್ರಕ್ಕೆ ರಾಜ್ಯಪಾಲ ಜಗದೀಪ್ ಧನಕರ್ ಪ್ರತ್ಯುತ್ತರ ನೀಡಿದ್ದಾರೆ.

ರಾಜ್ಯಪಾಲರು ಕೇವಲ ನಾಮ ನಿರ್ದೇಶಿತರಾದವರು ಎಂದು ನಿರಂತರವಾಗಿ ಹೇಳುತ್ತಿದ್ದೀರಿ, ಇದರಿಂದ ನಿಮಗೆ ಸಂವಿಧಾನದ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ ಎಂಬುದು ವಿಷಾಧನೀಯ ಎಂದು ಹೇಳಿದ್ದಾರೆ.

ನಿಮ್ಮ ಪತ್ರಕ್ಕೆ ಇದು ನನ್ನ ಮೊದಲ ಪ್ರತಿಕ್ರಿಯೆ, ಸಂಪೂರ್ಣ ದಾಖಲಾತಿಗಳನ್ನು ರಾಜ್ಯದ ಜನತೆ ಮುಂದಿಡುತ್ತೇನೆ, ನೀವು ಮತ್ತು ನಿಮ್ಮ ಸಂಪುಟ ಸದಸ್ಯರ ಅವಿವೇಕತನವನ್ನು ತೋರಿಸುತ್ತೇನೆ ಎಂದು ಹೇಳಿದ್ದಾರೆ.

"ಈ ಮೊದಲು ಕೇಂದ್ರ ತಂಡದ  ವಿರುದ್ಧ ನೀವು ಅನಗತ್ಯ ಆಕ್ಷೇಪ ಎತ್ತಿ ಅಸಹಕಾರ ತೋರಿದಿರಿ. ಈಗ ಅಂತಹದ್ದೇ ಅಧ್ಯಯನಕ್ಕೆ ಬಂದಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡಕ್ಕೆ ಕೆಂಪುಹಾಸಿನ ಅಬ್ಬರದ ಸ್ವಾಗತ  ನೀಡಿದ್ದೀರಿ. ಮಿಡ್ನಾಪುರ ಮತ್ತು ಬಿಷ್ಣುಪುರಕ್ಕೆ ಆ ತಂಡ ಭೇಟಿ ನೀಡಿದೆ ನಿಜ, ಆದರೆ ಅದರಿಂದ ಏನು ಉಪಯೋಗ ಆಗಿದೆ?

ಅದೆಲ್ಲವನ್ನು ನನಗೆ ವಿವರಿಸಿ. ಸಂವಿಧಾನಕ್ಕೆ ಬದ್ಧವಾಗಿ  ನಡೆದುಕೊಳ್ಳಬೇಕಾದ ಸಮಯ ಈಗ ಬಂದಿದೆ. ಒಣ ಅಬ್ಬರದ ಮಾತು ತೊರೆದು ತಾಳ್ಮೆಯಿಂದ ವರ್ತಿಸಿ,’’ ಎಂದು ದೀರ್ಘ ಟ್ವೀಟ್‌ ಮೂಲಕ ದೀದಿಯನ್ನು ಧನ್‌ಖರ್‌ ತರಾಟೆಗೆ  ತೆಗೆದುಕೊಂಡಿದ್ದರು, ಅದಕ್ಕೆ ಮಮತಾ ಬ್ಯಾನರ್ಜಿ 5 ಪುಟಗಳ ಸುದೀರ್ಘ ಪತ್ರವನ್ನು ರಾಜ್ಯಪಾಲರಿಗೆ ಬರೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

SCROLL FOR NEXT