ಸಂಗ್ರಹ ಚಿತ್ರ 
ದೇಶ

ಮಗನೊಂದಿಗೆ 10ನೇ ತರಗತಿ ಪರೀಕ್ಷೆ ಬರೆದ ತಾಯಿ, ಗಳಿಸಿದ ಅಂಕಗಳೆಷ್ಟು ಗೊತ್ತಾ?

ಮಗನೊಂದಿಗೆ ತಾಯಿಯೂ 10ನೇ ತರಗತಿ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಇಬ್ಬರೂ ಪಾಸ್ ಆಗಿರುವ ಅಪರೂಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಪುಣೆ: ಮಗನೊಂದಿಗೆ ತಾಯಿಯೂ 10ನೇ ತರಗತಿ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಇಬ್ಬರೂ ಪಾಸ್ ಆಗಿರುವ ಅಪರೂಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಹೌದು.. ಸಾಮಾನ್ಯವಾಗಿ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲಿ ಎಂದು ಪ್ರಾರ್ಥಿಸುವ ಮತ್ತು ಅದಕ್ಕಾಗಿ ಹಗಲಿರುಳೂ ಶ್ರಮಿಸುವ ಪೋಷಕರನ್ನು ನಾವು ನೋಡಿದ್ದೇವೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಎಸ್ಎಸ್ ಸಿ ಪರೀಕ್ಷೆ ಬರೆಯಬೇಕಿದ್ದ ಮಗನೊಂದಿಗೆ ತಾಯಿಯೂ ಕೂಡ ಪರೀಕ್ಷೆ ಬರೆದಿದ್ದು, ಅಷ್ಟು ಮಾತ್ರವಲ್ಲದೇ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಪುಣೆಯ ಬಾರಾಮತಿ ನಿವಾಸಿಗಳಾದ ಬೇಬಿ ಗುರವ್ ಎಂಬ ಗೃಹಿಣಿ ತನ್ನ ಮಗನೊಂದಿಗೆ ಎಸ್ಎಸ್ ಸಿ ಪರೀಕ್ಷೆ ಬರೆದಿದದ್ದರು. 

ಇದೀಗ ಆ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, 36 ವರ್ಷದ ಗುರವ್ ಅವರು ಶೇ.64.40ರಷ್ಚು  ಅಂಕಗಳನ್ನು ಗಳಿಸಿದ್ದೆ, ಪುತ್ರ ಸದಾನಂದ್ ಶೇ. 73.20ರಷ್ಚು ಅಂಕಗಳನ್ನು ಪಡೆದು ತಾಯಿಯನ್ನು ಮೀರಿಸಿದ್ದಾನೆ. 

ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ತಾಯಿ ಗುರವ್ ಅವರು, ತುಂಬಾ ಚಿಕ್ಕ ವಯಸ್ಸಿನಲ್ಲೇ ನನಗೆ ಮದುವೆ ಮಾಡಿಬಿಟ್ಟರು. ಹೀಗಾಗಿ ನನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಲಾಗಲಿಲ್ಲ. ಆದರೆ ನನ್ನ ಪತಿ ನನ್ನನ್ನು ಹುರಿದುಂಬಿಸಿ ಸ್ಪೂರ್ತಿ ನೀಡಿದರು. ಹೀಗಾಗಿ ನಾನು ನನ್ನ ಪುತ್ರನೊಂದಿಗೇ 10ನೇ ತರಗತಿ ಪರೀಕ್ಷೆ ಬರೆದೆ. ಪರೀಕ್ಷಾ ಸಂದರ್ಭದಲ್ಲಿ ನನ್ನ ಪುತ್ರ ಹಾಗೂ ನನ್ನ ಪತಿ ಸಾಕಷ್ಟು ನೆರವು ನೀಡಿದರು. ಹೀಗಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದೆನು. ಫಲಿತಾಂಶದ ಬಳಿಕ ನಿಜಕ್ಕೂ ನಾನು ಸಂತೋಷಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಬೇಬಿ ಗುರವ್ ಅವರು ಇಲ್ಲಿನ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಬೇಬಿ ಗುರವ್ ಅವರು ನಿತ್ಯ ಕೆಲಸದ ಸ್ಥಳಕ್ಕೇ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲಿಯೇ ಕೆಲಸ ಮಾಡುತ್ತಲೇ ಓದುತ್ತಿದ್ದರು. ಇದು ಅವರಲ್ಲಿ ಸಾಕಷ್ಟು ಧೈರ್ಯ ತುಂಬಿದೆ. ಮುಂದಿನ 12ನೇ ತರಗತಿ ಮೇಲೆ ಬೇಬಿ ಗುರವ್ ಅವರು ಕಣ್ಣಿಟ್ಟಿದ್ದಾರೆ. ಅದೂ ಕೂಡ ಸಾಕಾರವಾಗಲಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT