ದೇಶ

ಜಮ್ಮು-ಕಾಶ್ಮೀರ ವಿವಾದ: ವಿಶ್ವಸಂಸ್ಥೆ ಮಧ್ಯಪ್ರವೇಶಕ್ಕೆ ಪಾಕ್ ಮಾಡಿದ ಪ್ರಯತ್ನಗಳು ಫಲ ನೀಡಲಿಲ್ಲ- ಟಿ.ಎಸ್.ತಿರುಮೂರ್ತಿ

Nagaraja AB

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿವಾದದಲ್ಲಿ ವಿಶ್ವಸಂಸ್ಥೆಯ ಮಧ್ಯಪ್ರವೇಶಕ್ಕೆ ಪಾಕಿಸ್ತಾನ ಮಾಡಿದ ಪ್ರಯತ್ನಗಳು ಫಲ ನೀಡಲಿಲ್ಲ. ಪ್ರತಿಯೊಂದು ತಿರುವಿನಲ್ಲಿ ಭಾರತ ಬಲವಾಗಿ ನಿರಾಕರಿಸಿದೆ ಎಂದು ವಿಶ್ವಸಂಸ್ಥೆಯಲ್ಲಿ ಶಾಶ್ವತ ಪ್ರತಿನಿಧಿ ಟಿಎಸ್ ತಿರುಮೂರ್ತಿ ಹೇಳಿದ್ದಾರೆ.

ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಲು ಪಾಕಿಸ್ತಾನ ಪ್ರಯತ್ನಿಸುತ್ತಲೇ ಇದೆ. ನವೆಂಬರ್ 1965ರಿಂದಲೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ- ಪಾಕಿಸ್ತಾನ ವಿವಾದ ಸಂಬಂಧ ಔಪಚಾರಿಕ ಸಭೆ ನಡೆದಿಲ್ಲ,ಇತ್ತೀಚಿಗೆ ಚೀನಾ ಹೊರತುಪಡಿಸಿದಂತೆ ಎಲ್ಲಾ ರಾಷ್ಟ್ರಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿವೆ
ಎಂದು ತಿರುಮೂರ್ತಿ ಎಎನ್ ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪಾಕಿಸ್ತಾನ ಭಯೋತ್ಪಾದನೆಯ ಮೂಲ ನೆಲೆಯಾಗಿದ್ದು, ಲಷ್ಕರ್ -ಇ- ತೊಯ್ಬಾ, ಜೈಷ್-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್
ಸೇರಿದಂತೆ ಅನೇಕ   ಅಂತಾರಾಷ್ಟ್ರೀಯ ಮಟ್ಟದ  ಉಗ್ರರು ಹಾಗೂ ಉಗ್ರ ಕೃತ್ಯಗಳಿಗೆ ಆಶ್ರಯ ತಾಣವಾಗಿದೆ.ವಿಶ್ವದಾದ್ಯಂತ ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಭಾಗಿ ಕುರಿತಂತೆ ವಿಶ್ವಸಂಸ್ಥೆಯ ವರದಿಯಲ್ಲೂ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

SCROLL FOR NEXT