ದೇಶ

ರಾಮ ಮಂದಿರ ಭೂಮಿ ಪೂಜೆಯ ನಂತರ ಭಾರತದಲ್ಲಿ ಕೋಮು ಗಲಭೆ ಉಂಟುಮಾಡಲು ಐಎಸ್ಐ ಸಂಚು!

Srinivas Rao BV

ನವದೆಹಲಿ: ರಾಮ ಮಂದಿರ ಭೂಮಿ ಪೂಜೆಯ ಬೆನ್ನಲ್ಲೇ ಭಾರತದಲ್ಲಿ ಕೋಮು ಗಲಭೆ ಉಂಟುಮಾಡಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಂಚು ರೂಪಿಸಿದೆ ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ. 

ಭಾರತದಲ್ಲಿ ಶಾಂತಿಯುತ ವಾತಾವರಣವನ್ನು ಕದಡಲು ಐಎಸ್ಐ ಯತ್ನಿಸುತ್ತಿ. ವಾಯ್ಸ್ ಓವರ್ ಇಂಟರ್ ನೆಟ್ ಪ್ರೋಟೋಕಾಲ್ ಮೂಲಕ ಕೋಮುಗಲಭೆಗಳನ್ನು ಪ್ರಚೋದಿಸುವ ಕೆಲಸಕ್ಕೆ ಕೈ ಹಾಕುತ್ತಿದ್ದು, ಇದು ಲಖನೌ ಜನರಿಗೆ ತಲುಪುವಂತೆ ಮಾಡುತ್ತಿದೆ ಎಂದು ಜ್ಹೀ ಅಂತರ್ಜಾಲ ವರದಿ ಪ್ರಕಟಿಸಿದೆ. 

 ಜನಗಳಿಗೆ ವಿಐಪಿ ನಂಬರ್ ಗಳ ಮೂಲಕ ಕೋಮುಪ್ರಚೋದಕ ಸಂದೇಶ ಕರೆಗಳು ರವಾನೆಯಾಗುತ್ತಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, 12 ಕ್ಕೂ ಹೆಚ್ಚು ನಂಬರ್ ಗಳ ಮೇಲೆ ನಿಗಾ ವಹಿಸಿದ್ದಾರೆ. ಆ.05 ರಂದು ಭೂಮಿ ಪೂಜೆಯ ದಿನದಂದೇ ವಿಧ್ವಂಸಕ ಕೃತ್ಯಕ್ಕೆ ಐಎಸ್ಐ ಸಂಚು ರೂಪಿಸಿತ್ತು.

SCROLL FOR NEXT