ದೇಶ

ಹಿರಿಯ ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ವಿಧಿವಶ

Raghavendra Adiga

ನವದೆಹಲಿ: ಹೃದಯ ಸ್ತಂಭನ ಕಾರಣದಿಂದ ಕಾಂಗ್ರೆಸ್ ಮುಖಂಡ ಮತ್ತು ಪಕ್ಷದ ರಾಷ್ಟ್ರೀಯ ವಕ್ತಾರ ರಾಜೀವ್ ತ್ಯಾಗಿ ಬುಧವಾರ ನಿಧನರಾದರು.

ಕಾಂಗ್ರೆಸ್ ಪಕ್ಷದ ಟ್ವಿಟ್ತರ್ ನಲ್ಲಿ ಈ ಸುದ್ದಿಯನ್ನು ದೃಢೀಕರಿಸಲಾಗಿದ್ದು "ರಾಜೀವ್ ತ್ಯಾಗಿ ಅವರ ಹಠಾತ್ ನಿಧನದ ಬಗ್ಗೆ ನಮಗೆ ತುಂಬಾ ಬೇಸರವಿದೆ. ಒಬ್ಬ ಕಾಂಗ್ರೆಸ್ಸಿಗ ಮತ್ತು ನಿಜವಾದ ದೇಶಭಕ್ತರಾಗಿದ್ದ ತ್ಯಾಗಿ ಅವರ ನಿಧನದಿಂದ ನೊಂದ ಅವರ ಕುಟುಂಬ ಹಾಗೂ  ಸ್ನೇಹಿತರಿಗೆ ನಮ್ಮ ಸಂತಾಪವಿದೆ" ಎಂದು ಬರೆಯಲಾಗಿದೆ.

ತಮ್ಮ ಸಾವಿನ ಕೆಲ ಗಂಟೆಗಳ ಮುನ್ನ ರಾಜೀವ್ ತ್ಯಾಗಿ ಖಾಸಗಿ ಸುದ್ದಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎಂದು ಅವರ ಖಾತೆಯಲ್ಲೇ ಟ್ವೀಟ್ ಮಾಡಿ ಖಚಿತಪಡಿಸಿದ್ದರು. 

SCROLL FOR NEXT