ಭಾರತೀಯ ರೈಲ್ವೆ 
ದೇಶ

ರೈಲು ವಿಳಂಬವಾದರೆ ಖಾಸಗಿ ನಿರ್ವಾಹಕರಿಗೆ ಬೀಳಲಿದೆ ಭಾರೀ ದಂಡ!

ಭಾರತೀಯ ರೈಲ್ವೆ ನಿನ್ನೆ ಬಿಡುಗಡೆ ಮಾಡಿರುವ ಕಾರ್ಯಕ್ಷಮತೆ  ಸೂಚಕಗಳ ಕರಡುವಿನ ಪ್ರಕಾರ, ಒಂದು ವೇಳೆ ರೈಲು ತಲುಪುವುದು ವಿಳಂಬವಾದರೆ ಖಾಸಗಿ ನಿರ್ವಾಹಕರು ಭಾರೀ ದಂಡ ತೆರಬೇಕಾಗುತ್ತದೆ.

ನವದೆಹಲಿ: ಭಾರತೀಯ ರೈಲ್ವೆ ನಿನ್ನೆ ಬಿಡುಗಡೆ ಮಾಡಿರುವ ಕಾರ್ಯಕ್ಷಮತೆ  ಸೂಚಕಗಳ ಕರಡುವಿನ ಪ್ರಕಾರ, ಒಂದು ವೇಳೆ ರೈಲು ತಲುಪುವುದು ವಿಳಂಬವಾದರೆ ಖಾಸಗಿ ನಿರ್ವಾಹಕರು ಭಾರೀ ದಂಡ ತೆರಬೇಕಾಗುತ್ತದೆ.

ವರ್ಷಾದ್ಯಂತವರೆಗೂ ಖಾಸಗಿ ರೈಲು ನಿರ್ವಾಹಕರು ಶೇ.95 ರಷ್ಟು ಸಮಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಅಲ್ಲದೇ ಅವರಿಂದಾಗಿ ರೈಲು ರದ್ದು ಅಥವಾ ಆದಾಯಕ್ಕೆ ಸಂಬಂಧಿಸಿದಂತೆ ತಪ್ಪಾದ ವರದಿ ನೀಡಿದ್ದಲ್ಲಿ ಭಾರೀ ದಂಡವನ್ನು ತೆರಬೇಕಾಗುತ್ತದೆ.
 
ಕರಡು ಪ್ರಕಾರ, ರೈಲು ಒಂದು ವೇಳೆ 15 ನಿಮಿಷ ತಡವಾಗಿ ತಲುಪಿದರೆ ಸಮಯ ಪ್ರಜ್ಞೆ ಕಳೆದುಕೊಂಡಂತೆ ಎಂದು ಪರಿಭಾವಿಸಲಾಗುತ್ತದೆ.ಇಂತಹ ಸಂದರ್ಭದಲ್ಲಿ ಖಾಸಗಿ ನಿರ್ವಾಹಕರು ಪ್ರತಿ ಕಿಲೋ ಮೀಟರ್ ಗೆ 512 ರೂಪಾಯಿಯನ್ನು ತೆರಬೇಕಾಗುತ್ತದೆ. ಇದನ್ನು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುವುದು ಎಂದು ರೈಲ್ವೆ ತಿಳಿಸಿದೆ.

ಒಂದು ವೇಳೆ ಖಾಸಗಿ ರೈಲುಗಳು 10 ನಿಮಿಷ ಮುಂಚಿತವಾಗಿಯೂ ತಲುಪಿದರೂ ನಿರ್ವಾಹಕರು ದಂಡ ಪಾವತಿಸಬೇಕಾಗುತ್ತದೆ. ಖಾಸಗಿ ರೈಲುಗಳಲ್ಲಿ ಸಮಯ ಪ್ರಜ್ಞೆ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದು ವೇಳೆ ನಿರ್ವಾಹಕರ ಕಾರಣದಿಂದಾಗಿ ರೈಲು ಸೇವೆ ರದ್ದಾದರೆ ಆದರಿಂದ ಆಗುವ ನಷ್ಟದ ನಾಲ್ಕನೇ ಒಂದು
ಭಾಗದಷ್ಟು ಹಣವನ್ನು ನಿರ್ವಾಹಕರೇ ಪಾವತಿಸಬೇಕಾಗುತ್ತದೆ. ಆದಾಗ್ಯೂ,  ಪ್ರತಿಕೂಲ ಹವಾಮಾನ, ಹಳಿಗಳ ಮೇಲೆ ಜನ, ಜಾನುವಾರಗಳ ಸಂಚಾರ, ಅಪಘಾತ, ಸಾರ್ವಜನಿಕರ ಪ್ರತಿಭಟನೆ, ಕಾನೂನು ಮತ್ತು ಸುವ್ಯವಸ್ಥೆ, ಕಿಡಿಗೇಡಿಗಳ ಕುಕೃತ್ಯ
ಲೆವೆಲ್ ಕ್ರಾಸಿಂಗ್ ಗೇಟ್ ಗಳ ಬಳಿ ಭಾರಿ ದಟ್ಟಣೆ ಮತ್ತಿತರ ಸಂದರ್ಭಗಳಲ್ಲಿ ರೈಲಿನ ವೇಳೆಯಲ್ಲಿ ವ್ಯತ್ಯಾಸವಾದರೆ
ಅದಕ್ಕೆ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಲಾಗದು ಎಂದು ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran conflict: 'ಇತಿಹಾಸದಲ್ಲೇ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬರು ಮೃತಪಟ್ಟಿದ್ದಾರೆ'; ಇರಾನ್‌ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆ ದೃಢಪಡಿಸಿದ Donald Trump-Video

ಇರಾನ್ ಸರ್ವಾಧಿಕಾರಿ Ayatollah Khamenei ಹತ: Trump ಬಳಿಕ ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ಸ್ಪಷ್ಟನೆ

Ayatollah Ali Khamenei ಸಾವು: 40 ದಿನಗಳ ಶೋಕಾಚರಣೆಗೆ ಆದೇಶ, ಇರಾನ್ ಸೇನಾಧಿಕಾರಿ, ರಕ್ಷಣಾ ಸಚಿವ ಕೂಡ ಹತ

ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ?: ಅಲ್ಲಿನ ವಿದೇಶಾಂಗ ಸಚಿವ ಹೇಳಿದ್ದಿಷ್ಟು...

ಬುರ್ಜ್ ಖಲೀಫಾಗೂ ತಟ್ಟಿದ ಇರಾನ್-ಅಮೆರಿಕ ಯುದ್ಧದ ಬಿಸಿ; ಕ್ಷಿಪಣಿ ದಾಳಿ ಏಷ್ಯಾದ ವ್ಯಕ್ತಿಯೋರ್ವ ಸಾವು!

SCROLL FOR NEXT