ದೇಶ

ಬಾಲಿವುಡ್ ಮುಂಬೈನ ಕುಟುಂಬವಾಗಿದ್ದು, ಸುಶಾಂತ್ ನಮ್ಮ ಪುತ್ರನಿದ್ದಂತೆ, ನಮಗೆ ಯಾವ ದ್ವೇಷವಿರುತ್ತದೆ: ಶಿವಸೇನೆ

Manjula VN

ಮುಂಬೈ: ಬಾಲಿವುಡ್ ಮುಂಬೈನ ಕುಟುಂಬವಾಗಿದ್ದು, ಸುಶಾಂತ್ ಸಿಂಗ್ ರಜಪೂತ್ ನಮ್ಮ ಪುತ್ರನಿದ್ದಂತೆ ಹೀಗಿರುವಾಗ ನಮಗೇಕೆ ದ್ವೇಷವಿರುತ್ತದೆ. ಸುಶಾಂತ್ ಕುಟುಂಬಕ್ಕೆ ನ್ಯಾಯ ದೊರಕಲಿ ಎಂಬುದೇ ನಮ್ಮ ಆಶಯವೂ ಆಗಿದೆ ಎಂದು ಶಿವಸೇನೆ ಹೇಳಿದೆ. 

ಸುಶಾಂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಸುಶಾಂತ್ ಸಿಂಗ್ ರಜಪೂತ್ ನಮ್ಮ ಪುತ್ರ, ಅವರು ಮುಂಬೈನಲ್ಲಿ ನೆಲೆಯೂರಿದ್ದು. ನಟರಾಗಿದ್ದಾರೆ. ಬಾಲಿವುಡ್ ಮುಂಬೈನ ಕುಟುಂಬವಾಗಿದ್ದು, ನಮಗೇಕೆ ಶತೃತ್ವವಿರುತ್ತದೆ? ಸುಶಾಂತ್ ಕುಟುಂಬಕ್ಕೆ ನ್ಯಾಯ ದೊರಕಲಿ ಎಂದು ನಾವೂ ಬಯಸುತ್ತೇವೆ. ಸುಶಾಂತ್ ಸಾವಿನ ಹಿಂದೆ ಇರುವ ರಹಸ್ಯ ಹೊರಬರಲಿ ಎಂದು ನಾವೂ ಬಯಸುತ್ತೇವೆಂದು ಹೇಳಿದ್ದಾರೆ. 

ಸುಶಾಂತ್ ಕುಟುಂಬದ ಬಗ್ಗೆ ನಮಗೂ ಸಹಾನುಭೂತಿಯಿದೆ. ತಾಳ್ಮೆಯಿಂದಿರುವಂತೆ ಅಷ್ಟೇ ನಾನು ನಿನ್ನೆ ಹೇಳಿದ್ದೆ. ಆದರೆ, ಇದು ಅವರಿಗೆ ಬೆದರಿಕೆಯೊಡ್ಡಿದಂತೆ ತೋರ್ಪಡಿಸಲಾಗಿದೆ. ಆ ರೀತಿ ಹೇಳಿದ್ದು ಬೆದರಿಕೆಯೇ? ಮುಂಬೈ ಪೊಲೀಸರ ಮೇಲೆ ನಂಬಿಕೆ ಇಡಿ. ಅವರ ತನಿಖೆ ಸರಿಯಿಲ್ಲ ಎಂದಾದರೆ, ನಂತರ ನಾವು ಸಿಬಿಐ ಬಗ್ಗೆ ಚಿಂತನೆ ನಡೆಸೋಣ ಎಂದು ತಿಳಿಸಿದ್ದಾರೆ. 

SCROLL FOR NEXT