ದೇಶ

ತೆಲಂಗಾಣ: ಮಣ್ಣಿನ ಗುಡಿಸಲಿನ ಛಾವಣಿ ಕುಸಿದು ಬಿದ್ದು ತಾಯಿ-ಮಕ್ಕಳು ಸ್ಥಳದಲ್ಲಿಯೇ ಸಾವು

Sumana Upadhyaya

ಮೆಹಬೂಬ್ ನಗರ: ಸತತ ಮಳೆಯಿಂದ ಮಣ್ಣಿನ ಗೋಡೆಯ ಗುಡಿಸಲಿನ ಛಾವಣಿ ಕುಸಿದು ಬಿದ್ದು ತಾಯಿ ಮತ್ತು ಆಕೆಯ ಇಬ್ಬರು ಪುತ್ರಿಯರು ಮೃತಪಟ್ಟ ಘಟನೆ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಪಗಿದ್ಯಾಲ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು 45 ವರ್ಷದ ಶರಣಮ್ಮ ಮತ್ತು ಆಕೆಯ ಪುತ್ರಿಯರಾದ 14 ವರ್ಷದ ವೈಶಾಲಿ ಮತ್ತು 12 ವರ್ಷದ ಭವಾನಿ ಎಂದು ಗುರುತಿಸಲಾಗಿದೆ. 

ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ತೀವ್ರ ಮಳೆ ಸುರಿಯುತ್ತಿತ್ತು. ಇದರಿಂದ ಹಳೆ ಗುಡಿಸಲಿನ ಛಾವಣಿ ಕುಸಿದುಬಿದ್ದು ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಮ ರಾಜೇಶ್ವರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

ಶರಣಮ್ಮಳ ಪತಿ ಮಲ್ಲಪ್ಪ ದುರ್ಘಟನೆಯಲ್ಲಿ ಬಚಾವಾಗಿದ್ದು ಈ ವೇಳೆ ಅವರು ಮನೆಯ ಹೊರಗೆ ಮಲಗಿದ್ದರು. ಮೃತಪಟ್ಟವರ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.

SCROLL FOR NEXT