ಬೆಟ್ಟದ ಮೇಲೆ ಓದುತ್ತಿರುವ ಮಕ್ಕಳು 
ದೇಶ

ತಮಿಳು ನಾಡು: ಆನ್ ಲೈನ್ ತರಗತಿಯ ಪಾಠ ಕೇಳಬೇಕೆಂದರೆ ಈ ವಿದ್ಯಾರ್ಥಿಗಳು ಪ್ರತಿನಿತ್ಯ ಬೆಟ್ಟ ಏರಿ ಹೋಗಬೇಕು!

ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗಿಲ್ಲದಿರುವುದರಿಂದ ಆನ್ ಲೈನ್ ನಲ್ಲಿ ತರಗತಿಗಳು ನಡೆಯುತ್ತಿವೆ. ನಗರ ಪ್ರದೇಶಗಳ ಮಕ್ಕಳಿಗೆ ಸಮಸ್ಯೆಯಾಗುವುದಿಲ್ಲ, ಆದರೆ ಹಳ್ಳಿಗಳಲ್ಲಿ ಮಕ್ಕಳಿಗೆ ಇಂಟರ್ನೆಟ್ ಸಂಪರ್ಕ ಸರಿಯಾಗಿಲ್ಲದಿರುವುದರಿಂದ ಆನ್ ಲೈನ್ ತರಗತಿಗಳಲ್ಲಿ ಭಾಗಿಯಾಗಲು ಕಷ್ಟವಾಗುತ್ತಿದೆ.

 ತಿರುಚಿ: ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗಿಲ್ಲದಿರುವುದರಿಂದ ಆನ್ ಲೈನ್ ನಲ್ಲಿ ತರಗತಿಗಳು ನಡೆಯುತ್ತಿವೆ. ನಗರ ಪ್ರದೇಶಗಳ ಮಕ್ಕಳಿಗೆ ಸಮಸ್ಯೆಯಾಗುವುದಿಲ್ಲ, ಆದರೆ ಹಳ್ಳಿಗಳಲ್ಲಿ ಮಕ್ಕಳಿಗೆ ಇಂಟರ್ನೆಟ್ ಸಂಪರ್ಕ ಸರಿಯಾಗಿಲ್ಲದಿರುವುದರಿಂದ ಆನ್ ಲೈನ್ ತರಗತಿಗಳಲ್ಲಿ ಭಾಗಿಯಾಗಲು ಕಷ್ಟವಾಗುತ್ತಿದೆ.

ತಮಿಳು ನಾಡಿನ ತಿರುಚಿಯ ಪಚಮಲೈ ಪರ್ವತ ಭಾಗದ ಮನಲೊಡೈ ಗ್ರಾಮದ ಮಕ್ಕಳು ಪ್ರತಿದಿನ 1 ಕಿಲೋ ಮೀಟರ್ ನಡೆದುಕೊಂಡು ಹೋಗಿ ಗುಹೆಯ ರೀತಿಯ ಸ್ಥಳದಲ್ಲಿ ಬೆಟ್ಟದ ತುದಿಯಲ್ಲಿ ಕುಳಿತು ಆನ್ ಲೈನ್ ಪಾಠ ಕೇಳಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಎಲ್ಲಿಯೂ ಇಂಟರ್ನೆಟ್ ಸಿಗುವುದಿಲ್ಲ. ಬೆಟ್ಟದ ತುದಿಗೆ ಹೋದರೆ ಮಾತ್ರ ಸಿಗ್ನಲ್ ಸಿಗುವುದರಿಂದ ಮಕ್ಕಳು ಪಠ್ಯಪುಸ್ತಕ, ನೋಟ್ ಪುಸ್ತಕ ಹಿಡಿದುಕೊಂಡು ಹೋಗಬೇಕಾಗುತ್ತದೆ.

ಆಗಸ್ಟ್ ಮೊದಲ ವಾರದಿಂದ ನಮ್ಮ ಶಿಕ್ಷಕರು ಆನ್ ಲೈನ್ ನಲ್ಲಿ ತರಗತಿ ಆರಂಭಿಸಿದ್ದಾರೆ. ಅವರು ರೆಕಾರ್ಡ್ ವಿಡಿಯೊಗಳನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಕಳುಹಿಸುತ್ತಾರೆ. ಆ ವಿಡಿಯೊಗಳನ್ನು ನಾವು ಡೌನ್ ಲೋಡ್ ಮಾಡಿಕೊಂಡು ಪಾಠಗಳನ್ನು ಕೇಳಿಸಿಕೊಳ್ಳಬೇಕು ಎನ್ನುತ್ತಾರೆ 12ನೇ ತರಗತಿ ಜೀವಶಾಸ್ತ್ರ ವಿದ್ಯಾರ್ಥಿನಿ ಎಸ್ ದೀಪಿಕಾ.

ಈ ಬೆಟ್ಟದ ಗುಹೆಯಂತಹ ಪ್ರದೇಶದಲ್ಲಿ ಕೂಡ ಸಿಗ್ನಲ್ ಅಷ್ಟೊಂದು ಚೆನ್ನಾಗಿ ಸಿಗುವುದಿಲ್ಲವಂತೆ. ತುಂಬ ಹೊತ್ತು ಕಾದ ನಂತರ ಸಿಗುತ್ತದೆ. ವನ್ನಡು ಮತ್ತು ಕೊಂಬೈ ಗ್ರಾಮ ಪಂಚಾಯತ್ ಗಳಲ್ಲಿ 32 ಬುಡಕಟ್ಟು ಗ್ರಾಮಗಳಿವೆ. ಇಲ್ಲಿ 25 ಕಿಲೋ ಮೀಟರ್ ದೂರದಲ್ಲಿ ಶಾಲೆಗಳಲ್ಲಿ ಮಕ್ಕಳು ಕಲಿಯುತ್ತಾರೆ, ಹಲವರು ಹಾಸ್ಟೆಲ್ ಗಳಲ್ಲಿ ಉಳಿದುಕೊಂಡಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ ವಾಟ್ಸಾಪ್ ಗ್ರೂಪ್ ನಲ್ಲಿ ವಿಡಿಯೊಗಳನ್ನು ಕಳುಹಿಸುತ್ತಿದ್ದರೆ ಖಾಸಗಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಇನ್ನಷ್ಟು ಕಷ್ಟವಾಗುತ್ತದೆ, ಲೈವ್ ಕ್ಲಾಸ್ ಪ್ರತಿದಿನ ಮಾಡುವುದರಿಂದ ಈ ಬುಡಕಟ್ಟು ಮಕ್ಕಳಿಗೆ ತರಗತಿಗಳಿಗೆ ಹಾಜರಾಗುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಎಸ್ ಸೂರ್ಯ ಎಂಬ ವಿದ್ಯಾರ್ಥಿ.

ಇಡೀ ಗ್ರಾಮಕ್ಕೆ ಒಂದೇ ಒಂದು ಬಿಎಸ್ ಎನ್ ಎಲ್ ಸಿಗ್ನಲ್ ಇದ್ದು, ಅದನ್ನೇ ನಂಬಿಕೊಂಡಿದ್ದೇವೆ. ವಿದ್ಯುತ್ ಇಲ್ಲದಿದ್ದರೆ ಅದು ಕೂಡ ಸಿಗುವುದಿಲ್ಲ. ಫೋನ್ ಕರೆ ಮಾಡಲು ಕೂಡ ಸಾಧ್ಯವಾಗುವುದಿಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

'ದೇಶದ ಘನತೆಗೆ ಮಾಡಿದ ಭೀಕರ ದ್ರೋಹ': ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಜಡ್ಜ್‌ಗಳು ಸೇರಿ 270 ನಿವೃತ್ತ ಅಧಿಕಾರಿಗಳ ಖಂಡನೆ!

T20 World Cup 2026: ಬ್ರೂಕ್ ಭರ್ಜರಿ ಶತಕ; ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್​

ಪ್ರಧಾನಿ ಮೋದಿ ಇಸ್ರೇಲ್ ಭೇಟಿಗೂ: ಇಸ್ಲಾಮಿಕ್ ಉಗ್ರವಾದದ ವಿರುದ್ಧ ಷಡ್ಭುಜ ಕೂಟ ಘೋಷಿಸಿದ ನೆತನ್ಯಾಹು!

ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿಕೆ ಶಶಿಕಲಾರಿಂದ ಹೊಸ ಪಕ್ಷ ಸ್ಥಾಪನೆ; ರಾಮನಾಥಪುರಂನಲ್ಲಿ ಧ್ವಜ ಅನಾವರಣ

SCROLL FOR NEXT