ಸುಶಾಂತ್ ಸಿಂಗ್-ರಿಯಾ ಚಕ್ರವರ್ತಿ 
ದೇಶ

ಸುಶಾಂತ್ ಸಿಂಗ್ ಪ್ರಕರಣ: ಶವಾಗಾರಕ್ಕೆ ರಿಯಾ ಭೇಟಿ ಪ್ರಶ್ನಿಸಿದ ‘ಮಹಾ’ ಮಾನವ ಹಕ್ಕುಗಳ ಆಯೋಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ(ಎಂಎಸ್‌ಎಚ್‌ಆರ್‌ಸಿ) ಬುಧವಾರ ಮುಂಬೈ ಪೊಲೀಸ್ ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆಯಿಂದ ವಿವರಣೆಯನ್ನು ಕೋರಿದೆ.

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ(ಎಂಎಸ್‌ಎಚ್‌ಆರ್‌ಸಿ) ಬುಧವಾರ ಮುಂಬೈ ಪೊಲೀಸ್ ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆಯಿಂದ ವಿವರಣೆಯನ್ನು ಕೋರಿದೆ.

ಈ ವಿಷಯದ ಬಗ್ಗೆ ಸ್ವಯಂಪ್ರೇರಿತವಾಗಿ ಪರಿಶೀಲನೆಗೆ ಮುಂದಾಗಿರುವ ಎಂಎಸ್‍ ಎಚ್‍ಆರ್ ಸಿ,  ಆಗಸ್ಟ್ 31ರೊಳಗೆ ಈ ಬಗ್ಗೆ  ವಿವರಣೆಯನ್ನು ಸಲ್ಲಿಸುವಂತೆ ಪೊಲೀಸ್ ಮತ್ತು ನಾಗರಿಕ ಅಧಿಕಾರಿಗಳಿಗೆ ಆದೇಶಿಸಿದೆ.

ರಿಯಾ ಚಕ್ರವರ್ತಿಯ ಜೂನ್ 14 ರಂದು ಆರ್ ಎನ್ ಕೂಪರ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ವಿಡಿಯೋ ಮತ್ತು ಸುದ್ದಿ ವರದಿಗಳನ್ನು ಎಂಎಸ್‌ಎಚ್‌ಆರ್‌ಸಿ ಸೂಕ್ಷ್ಮವಾಗಿ ಗಮನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸುಶಾಂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅವರ ವಿಚಾರಣೆ ವೇಳೆ ಅವರ ವಾಟ್ಸ್ ಆಪ್ ಚಾಟ್ ಹಿಸ್ಟರಿಯಲ್ಲಿ ಡ್ರಗ್ಸ್ ಸಂಪರ್ಕ ಇರುವುದು ಬಹಿರಂಗಗೊಂಡಿದೆ. ಜ್ಹೀ ನ್ಯೂಸ್ ಪ್ರಕಟಿಸಿರುವ ವರದಿಯ ಪ್ರಕಾರ ಪ್ರಕರಣದಲ್ಲಿ ಡ್ರಗ್ಸ್ ಕಾನ್ಸ್ಪಿರೆಸಿ ತೆರೆದುಕೊಳ್ಳುತ್ತಿದೆ. ವಾಟ್ಸ್ ಆಪ್ ಚಾಟ್ ನಲ್ಲಿ ರಿಯಾ ಚಕ್ರವರ್ತಿ ಡ್ರಗ್ಸ್ ಬಗ್ಗೆ ಮಾತನಾಡಿದ್ದರು.

ರಿಯಾ ಚಕ್ರವರ್ತಿ ಹಲವು ಚಾಟ್ ಗಳನ್ನು ಡಿಲೀಟ್ ಮಾಡಿದ್ದರು. ಇವುಗಳನ್ನು ಪುನಃ ಪಡೆಯಲಾಗಿದೆ. ಮೊದಲ ಚಾಟ್ ನಲ್ಲಿ ರಿಯಾ ಚಕ್ರವರ್ತಿ ಹಾಗೂ ಡ್ರಗ್ ಡೀಲರ್ ಎಂದು ಹೇಳಲಾಗುತ್ತಿರುವ ಗೌರವ್ ಆರ್ಯ ನಡುವೆ ನಡೆದಿದೆ. ನಾವು ಹಾರ್ಡ್ ಡ್ರಗ್ಸ್ ಬಗ್ಗೆ ಮಾತನಾಡುವುದಾದರೆ ನಾನು ಹೆಚ್ಚಿನ ಡ್ರಗ್ಸ್ ನ್ನು ಬಳಕೆ ಮಾಡಿಲ್ಲ ಎಂದು ಗೌರವ್ ಗೆ ರಿಯಾ ಚಕ್ರವರ್ತಿ ಮಾ.08, 2017 ರಲ್ಲಿ ಮೆಸೇಜ್ ಕಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT