ದೇಶ

ಪ್ರಣಬ್ ದಾದಾ ಇಲ್ಲದ ದೆಹಲಿ ಭೇಟಿ ಊಹಿಸಿಲು ಸಾಧ್ಯವಾಗುತ್ತಿಲ್ಲ: ಮಮತಾ ಬ್ಯಾನರ್ಜಿ ಕಂಬನಿ

Srinivas Rao BV

ಕೋಲ್ಕತಾ: ಮಾಜಿ ರಾಷ್ಟ್ರಪತಿ ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ನಮ್ಮನ್ನು ಅಗಲಿರುವುದು ತೀವ್ರ ದುಃಖ ತಂದಿದೆ. ಅವರ ಸಾವಿನೊಂದಿಗೆ ಒಂದು ಯುಗ ಕೊನೆಗೊಂಡಿದೆ ಎಂದು ಹೇಳಿದ್ದಾರೆ.  

ದಶಕಗಳಿಂದ ಪ್ರಣಬ್ ಮುಖರ್ಜಿ ಅವರನ್ನು ತಂದೆಯ ಸಮಾನವಾಗಿ ಭಾವಿಸಿದ್ದೆ, ಪ್ರಣಬ್ ಮುಖರ್ಜಿ ಅವರೊಂದಿಗಿನ ಒಡನಾಟ ಸ್ಮರಿಸಿರುವ ದೀದೀ, ಮೊದಲ ಬಾರಿಗೆ ತಾವು ಸಂಸತ್ ಸದಸ್ಯರಾಗಿಗೆದ್ದಾಗ, ಅವರು ಹಿರಿಯ ಸಂಪುಟ ಸಹೋದ್ಯೋಗಿಯಾಗಿದ್ದರು. ನಂತರ ತಾವು  ಮುಖ್ಯಮಂತ್ರಿಯಾದಾಗ ಪ್ರಣಬ್ ದಾದಾ ರಾಷ್ಟ್ರಪತಿಯಾಗಿದ್ದನ್ನು ಮರೆಯಲಾಗದು ಎಂದು ಮಮತಾ ಹೇಳಿದ್ದಾರೆ.

SCROLL FOR NEXT