ದೇಶ

ಕೃಷಿ ಕಾನೂನು ವಿರೋಧಿಸಿ ಭಾರತ್ ಬಂದ್: ರೈತರ ಪ್ರತಿಭಟನೆಗೆ ಬಿಎಸ್ ಪಿ ಬೆಂಬಲ, ಮಾಯಾವತಿ ಟ್ವೀಟ್

Srinivasamurthy VN

ಪಾಟ್ನಾ: ಡಿಸೆಂಬರ್ 8 ಮಂಗಳವಾರದಂದು ರೈತ ಸಂಘಟನೆಗಳು ಕರೆ ನೀಡಿರುವ ಭಾರತ್‌ ಬಂದ್‌ಗೆ ಬಹುಜನ ಸಮಾಜವಾದಿ ಪಕ್ಷ (ಬಿಎಸ್ ಪಿ) ಬೆಂಬಲ ಸೂಚಿಸಿದೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು, 'ಕೃಷಿಗೆ ಸಂಬಂಧಿಸಿದ ಮೂರು ಹೊಸ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ರೈತರು ದೇಶಾದ್ಯಂತ ಆಂದೋಲನ ನಡೆಸುತ್ತಿದ್ದಾರೆ ಮತ್ತು ಡಿಸೆಂಬರ್ 8 ರಂದು ರೈತರು ಘೋಷಣೆ ಮಾಡಿರುವ "ಭಾರತ್ ಬಂಧ್"ಗೆ ಬಿಎಸ್ಪಿ  ಬೆಂಬಲ ನೀಡಿದೆ. ಅಲ್ಲದೆ, ರೈತರ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮತ್ತೆ ಮನವಿ ಮಾಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಡಿಸೆಂಬರ್ 8ರ ಭಾರತ್ ಬಂದ್ ಗೆ ಎಡಪಕ್ಷಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದು, ಕಾಂಗ್ರೆಸ್ ಪಕ್ಷ ಕೂಡ ಬೆಂಬಲ ಸೂಚಿಸಿದೆ. ಇದಲ್ಲದೆ ಭಾರತೀಯ ಪ್ರವಾಸಿ ಸಾರಿಗೆ ಸಂಘ ಕೂಡಾ ಡಿಸೆಂಬರ್ 8ರ ಭಾರತ್ ಬಂದ್‌ ಕರೆಗೆ ತಮ್ಮ ಬೆಂಬಲ ಸೂಚಿಸಿದೆ. ದೇಶಾದ್ಯಂತ 51  ಸಾರಿಗೆ ಸಂಘಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ಪ್ರತಿಭಟನೆಗೆ ತೆರಳುವ ರೈತರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವ ಕೆಲಸ ಮಾಡುವುದಾಗಿ ಸಂಘಟನೆ ಘೋಷಿಸಿದೆ.

SCROLL FOR NEXT