ಸಾಂದರ್ಭಿಕ ಚಿತ್ರ 
ದೇಶ

ಕಾಶ್ಮೀರ: ಎನ್‌ಕೌಂಟರ್‌ ಆದ 3 ಉಗ್ರರು ಮುಗ್ಧರು ಎಂದ ಸಂಬಂಧಿಗಳು, ತನಿಖೆ ಆರಂಭಿಸಿದ ಪೊಲೀಸರು

ಭದ್ರತಾ ಪಡೆಗಳು ಲಾವಪೊರಾದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮೂವರು ಯುವಕರು ಮುಗ್ಧರಾಗಿದ್ದು, ಯಾವುದೇ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.

ಶ್ರೀನಗರ: ಭದ್ರತಾ ಪಡೆಗಳು ಲಾವಪೊರಾದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮೂವರು ಯುವಕರು ಮುಗ್ಧರಾಗಿದ್ದು, ಯಾವುದೇ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ. ಇನ್ನು ಈ ಮೂವರು ತಮ್ಮ ಉಗ್ರರ ಪಟ್ಟಿಯಲ್ಲಿಲ್ಲ ಎಂದಿರುವ ಪೊಲೀಸರು, ಈ ಕುರಿತು ಸಮಗ್ರ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಮೃತ ಯುವಕರಾದ ಜುಬೈರ್ ಅಹ್ಮದ್ ಲೋನ್, ಪುಲ್ವಾಮಾ ಮೂಲದ ಐಜಾಜ್ ಮಕ್ಬೂಲ್ ಗಣೈ(ಪದವಿಪೂರ್ವ ವಿದ್ಯಾರ್ಥಿ) ಮತ್ತು ಅಥರ್ ಮುಷ್ತಾಕ್ (11 ನೇ ತರಗತಿ ವಿದ್ಯಾರ್ಥಿ) ನಿರಪರಾಧಿಗಳಾಗಿದ್ದು, ಯಾವುದೇ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಸಂಬಂಧಿಗಳು ಹೇಳಿದ್ದಾರೆ.

ಐಜಾಜ್ ಅವರ ತಂದೆ ಪೊಲೀಸರಾಗಿದ್ದಾರೆ ಮತ್ತು ಜುಬೈರ್ ಅವರ ಇಬ್ಬರು ಸಹೋದರರು ಸಹ ಪೊಲೀಸರಾಗಿದ್ದಾರೆ.

ನನ್ನ ಮೊಮ್ಮಗ ನಿರಪರಾಧಿ ಮತ್ತು ಮುಗ್ಧನಾಗಿದ್ದು, ಆತನನ್ನು ಏಕೆ ಹತ್ಯೆ ಮಾಡಿದರು ಎಂಬುದು ಗೊತ್ತಿಲ್ಲ ಎಂದು ಐಜಾಜ್ ಅವರ ಅಜ್ಜ ಬಶೀರ್ ಅಹ್ಮದ್ ಗನೈ ಅವರು ಹೇಳಿದ್ದಾರೆ.

“ನನ್ನ ಮೊಮ್ಮಗನನ್ನು ಬಂಧಿಸಿ, ಕ್ಯಾಬ್ ನಲ್ಲಿ ಕರೆತಂದು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಅವರು ಪ್ರತಿ ಕಾಶ್ಮೀರಿಗಳನ್ನು ಕೊಲ್ಲಲು ಬಯಸುತ್ತಾರೆ” ಎಂದು ಗನೈ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

SCROLL FOR NEXT