ಸಾಂದರ್ಭಿಕ ಚಿತ್ರ 
ದೇಶ

ಹೋಟೆಲ್ ನ ಪನ್ನೀರ್ ಕರಿ ಸೇವಿಸಿ 2 ವರ್ಷದ ಬಾಲಕ ಸಾವು!

ಪೋಷಕರ ಜೊತೆ ಹೋಟೆಲ್ ಗೆ ತೆರಳಿ ರೋಟಿ ಕರಿ ಸೇವಿಸಿದ 2 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ   ಹೈದಾರಾಬಾದ್ ನ ಬೇಗುಂಪೇಟೆಯಲ್ಲಿ ನಡೆದಿದೆ.

ಹೈದರಾಬಾದ್:  ಪೋಷಕರ ಜೊತೆ ಹೋಟೆಲ್ ಗೆ ತೆರಳಿ ರೋಟಿ ಕರಿ ಸೇವಿಸಿದ 2 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ   ಹೈದಾರಾಬಾದ್ ನ ಬೇಗುಂಪೇಟೆಯಲ್ಲಿ ನಡೆದಿದೆ.

ಫೆಬ್ರವರಿ 10 ರಂದು ನಗರಕ್ಕೆ ಆಗಮಿಸಿದ್ದ ಕುಟುಂಬ  ಯುಎಸ್ ರಾಯಭಾರ ಕಚೇರಿಬಳಿಯಿರುವ ಮಾನಸ ಸರೋವರ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು.  ವೀಸಾಗಾಗಿ ಫಿಂಗರ್ ಪ್ರಿಂಟ್ ಕೊಡಲು  ರಾಯಬಾರ ಕಚೇರಿಗೆ ತೆರಳುವ ಮುನ್ನ  ಕುಟುಂಬ ಬೆಳಗಿನ ಉಪಹಾರ ಸೇವಿಸಿತ್ತು,  ನಂತರ ಅಲ್ಲಿನ ಪ್ರವಾಸಿ ಸ್ಥಳ ನೋಡಲು ತೆರಳಿದ್ದರು. ನಂತರ ಅಲ್ಲಿಂದ ಬಂದು ಹೋಟೆಲ್ ನಲ್ಲಿ ರೋಟಿ ಮತ್ತು ಪನ್ನೀರ್ ಕರಿ ಸೇವಿಸಿದ್ದರು.

ಖಮ್ಮಮ್ಮ ನಿವಾಸಿಯಾದ  ರವಿ ನಾರಾಯಣ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನೀಯರಿಂಗ್ ಆಗಿ ಕೆಲಸ ಮಾಡುತ್ತಿದ್ದರು.ಯುಎಸ್ ಗೆ ತೆರಳಲು ಪತ್ನಿ ಮತ್ತು ಮಗನ ವೀಸಾಗೆ ಅರ್ಜಿ ಹಾಕಿದ್ದರು.

ಮಧ್ಯರಾತ್ರಿ ಬಾಲಕ ವಿಹಾನ್ ಮತ್ತು  ಆತನ ತಂದೆ ರವಿಗೆ ಮಧ್ಯರಾತ್ರಿ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ರವಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ, ಅದಾದ ನಂತರ ಮಗು  ವಿಹಾನ್ ಅಸ್ವಸ್ಥನಾಗಿ ಪ್ರಜ್ಞೆ ಕಳೆದುಕೊಂಡಿದ್ದಾನೆಂದು ಆತನ ಪತ್ನಿ ಕರೆ ಮಾಡಿದ್ದರು ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
 
ಕೂಡಲೇ ಮಗುವನ್ನು  ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.  ಕೂಡಲೇ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನೀಡುತ್ತಿದ್ದ ವೇಳೆಯೇ ಮಗು ಸಾವನ್ನಪ್ಪಿದೆ, ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ರವಿನಾರಾಯಣ್ ಕುಟುಂಬ ಸೇವಿಸಿದ್ದ ಆಹಾರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಆಹಾರ ವಿಷಯುಕ್ತವಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT