ಕೆ ಸಿ ರಾಮಮೂರ್ತಿ 
ದೇಶ

ದಶಕಗಳಿಂದ ಸರ್ಕಾರಿ ಬಂಗಲೆಗಳಲ್ಲಿ ಅಕ್ರಮವಾಗಿ ನೆಲೆಸಿರುವ ಜನಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳು!

ಸರ್ಕಾರಿ ಸೌಲಭ್ಯಗಳನ್ನು ಜನಪ್ರತಿನಿಧಿಗಳು ದುರುಪಯೋಗಪಡಿಸಿಕೊಳ್ಳುವ ಆರೋಪ ಹಿಂದಿನಿಂದಲೂ ಇದೆ. ಅದಕ್ಕೆ ಉದಾಹರಣೆಯೆಂಬಂತೆ ಇಬ್ಬರು ಸಂಸದರು, 9 ಮಾಜಿ ಸಂಸದರು, 576 ಮಂದಿ ಇತರ ನಿವೃತ್ತ ಅಧಿಕಾರಿಗಳು ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ನೀಡುವ ಅಧಿಕೃತ ನಿವಾಸಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ.

ನವದೆಹಲಿ: ಸರ್ಕಾರಿ ಸೌಲಭ್ಯಗಳನ್ನು ಜನಪ್ರತಿನಿಧಿಗಳು ದುರುಪಯೋಗಪಡಿಸಿಕೊಳ್ಳುವ ಆರೋಪ ಹಿಂದಿನಿಂದಲೂ ಇದೆ. ಅದಕ್ಕೆ ಉದಾಹರಣೆಯೆಂಬಂತೆ ಇಬ್ಬರು ಸಂಸದರು, 9 ಮಾಜಿ ಸಂಸದರು, 576 ಮಂದಿ ಇತರ ನಿವೃತ್ತ ಅಧಿಕಾರಿಗಳು ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ನೀಡುವ ಅಧಿಕೃತ ನಿವಾಸಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಅದರಲ್ಲೂ ಕೆಲವರು ಹತ್ತಿಪ್ಪತ್ತು ವರ್ಷಗಳಿಂದ ಅಲ್ಲಿಯೇ ಉಳಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 


ಇದರಿಂದ ಸಾರ್ವಜನಿಕ ಹಣ ದುರುಪಯೋಗವಾಗುತ್ತದೆ ಎಂದು ವಸತಿ ಸಚಿವಾಲಯ ತಯಾರು ಮಾಡಿರುವ ಆಂತರಿಕ ವರದಿಯಿಂದ ಇದು ಬಹಿರಂಗಗೊಂಡಿದೆ. ಕಾನೂನು ಮತ್ತು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಲು ಸಿದ್ದಪಡಿಸಿದ ಆಂತರಿಕ ವರದಿ ಇದಾಗಿದೆ.


ಕೆಲವರು 1998ರಿಂದಲೂ, ಇನ್ನು ಕೆಲವರು 2000, 2001, 2003, 2005ರಿಂದಲೂ ಸರ್ಕಾರಿ ನಿವಾಸಗಳಲ್ಲಿ ನೆಲೆಸಿದ್ದಾರೆ. 9 ಕುಟುಂಬಗಳು ಸರ್ಕಾರದ ಫ್ಲಾಟ್ ಗಳಲ್ಲಿ ದಶಕಗಳಿಂದಲೂ ಹೆಚ್ಚು ಸಮಯದಿಂದ ನೆಲೆಸಿದ್ದಾರೆ. ಮತ್ತೆ 9 ಮಂದಿ ಸರ್ಕಾರದ ಫ್ಲಾಟ್ ಗಳಲ್ಲಿ ದಶಕದಿಂದ ಅಕ್ರಮವಾಗಿ ನೆಲೆಸಿದ್ದು, ಪ್ರತಿಯೊಬ್ಬರೂ 50 ಲಕ್ಷಕ್ಕಿಂತ ಹೆಚ್ಚು ರೂಪಾಯಿಗಳನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ.


ನಿವೃತ್ತ ಅಧಿಕಾರಿಗಳಾದ ವಿ ಪಿ ರಾವ್ ದೆಹಲಿಯ ರಾಜ್ ಪುರ್ ರಸ್ತೆಯಲ್ಲಿ ಅಕ್ರಮವಾಗಿ ಬಂಗಲೆಯಲ್ಲಿ ನೆಲೆಸಿದ್ದು 95 ಲಕ್ಷಕ್ಕೂ ಹೆಚ್ಚು ಬಾಡಿಗೆ ಉಳಿಸಿಕೊಂಡಿದ್ದಾರೆ. ಮತ್ತೊಬ್ಬ ಮಾಜಿ ಅಧಿಕಾರಿ ಆರ್ ಕೆ ಸ್ವಾಮಿ 2001ರಲ್ಲಿ ನಿವೃತ್ತಿ ಹೊಂದಿದ್ದರು. ವಿಕಾಸ್ಪುರಿಯಲ್ಲಿ ಸರ್ಕಾರಿ ಮನೆಯಲ್ಲಿ ಅಕ್ರಮವಾಗಿ ನೆಲೆಸಿದ್ದು 74 ಲಕ್ಷ ರೂಪಾಯಿ ಬಾಡಿಗೆ ಪಾವತಿಸಬೇಕಾಗಿದೆ.


ಇಬ್ಬರು ಸಂಸದರು, 9 ಮಾಜಿ ಸಂಸದರು ದೆಹಲಿಯ ಲುತ್ಯೆನ್ಸ್ ನಲ್ಲಿ ಅಕ್ರಮವಾಗಿ ಬಂಗಲೆಗಳಲ್ಲಿ ನೆಲೆಸಿದ್ದು ಅವರಿಗೆ ತೆರವು ಮಾಡುವಂತೆ ನೊಟೀಸ್ ನೀಡಲಾಗಿದೆ. ಕಳೆದ ವರ್ಷ 16ನೇ ಲೋಕಸಭೆ ವಿಸರ್ಜನೆಯಾದ ನಂತರವೂ ಸಹ ಇವರೆಲ್ಲ ನೆಲೆಸಿದ್ದಾರೆ.
ಲೋಕಸಭಾ ಸದಸ್ಯೆ ವೀಣಾ ದೇವಿ 6ನೇ ವಿಧದ ಬಂಗಲೆಯಲ್ಲಿ ದೆಹಲಿಯ ತಿಲಕ್ ನಗರದಲ್ಲಿ ನೆಲೆಸಿದ್ದಾರೆ, ಇನ್ನು ರಾಜ್ಯ ಸಭಾ ಸದಸ್ಯ ಕೆ ಸಿ ರಾಮಮೂರ್ತಿ ಅವರು ಸಹ ಸರ್ಕಾರಿ ಬಂಗಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT