ದೇಶ

ದೆಹಲಿ ಹಿಂಸಾಚಾರ: ಕಾಂಗ್ರೆಸ್ ನಿಂದ ಕೊಳಕು ರಾಜಕೀಯ – ಪ್ರಕಾಶ್ ಜಾವೇಡೆಕರ್

Vishwanath S

ನವದೆಹಲಿ: ದೆಹಲಿ ಗಲಭೆ ಮತ್ತು ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆ ಕಾಂಗ್ರೆಸ್ ಇಲ್ಲ, ಸಲ್ಲದ ಆರೋಪ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಗಲಭೆ ನಡೆಯುವಾಗ ಕೇಂದ್ರ ಸಚಿವ ಅಮಿತ್ ಶಾ ಎಲ್ಲಿದ್ದರು , ಏನು ಮಾಡುತ್ತಿದ್ದರು ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಪ್ರಶ್ನೆ ಮಾಡಿರುವುದು ಕೀಳು ಮತ್ತು ಕೊಳಕಿನ ರಾಜಕೀಯ ಎಂದು ಜಾವೇಡ್ಕರ್ ಲೇವಡಿ ಮಾಡಿದ್ದಾರೆ. 

ಗಲಭೆ ನಿಯಂತ್ರಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಚಿವ  ಅಮಿತ್ ಶಾ ಮೇಲಿಂದ ಮೇಲೆ ಹಿರಿಯ ಅಧಿಕಾರಗಳ ಸಭೆ ನಡೆಸಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ಧೋವಲ್ ಗಲಭೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಾಗರಿಕರಲ್ಲಿ ವಿಶ್ವಾಸ ತುಂಬವ ಕೆಲಸ ಮಾಡಿದ್ದಾರೆ. ಇದು ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ಕಣ್ಣಿಗೆ ಕಾಣುವುದಿಲ್ಲವೇ ಎಂದು ಅವರು ಹೇಳಿದ್ದಾರೆ.

SCROLL FOR NEXT