ದೇಶ

ಭಾರತ ಬಂದ್ ನಲ್ಲಿ ಭಾಗಿಯಾಗಿರುವ 25 ಕೋಟಿ ಕಾರ್ಮಿಕರಿಗೆ ನನ್ನ ವಂದನೆಗಳು:ರಾಹುಲ್ ಗಾಂಧಿ 

Sumana Upadhyaya

ನವದೆಹಲಿ: ಹತ್ತು ಕಾರ್ಮಿಕ ಮತ್ತು ವ್ಯಾಪಾರ ಸಂಘಟನೆಗಳು ಬುಧವಾರ ಕರೆ ನೀಡಿರುವ ಭಾರತ ಬಂದ್ ನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ.


ಈ ಕುರಿತು ಟ್ವೀಟ್ ಮಾಡಿರುವ ಅವರು, ಮೋದಿ-ಶಾ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ. ಮೋದಿಯವರ ಬಂಡವಾಳಶಾಹಿ ಧೋರಣೆಯಿಂದ ಸಾರ್ವಜನಿಕ ವಲಯಗಳು ಇಂದು ದುರ್ಬಲಗೊಂಡಿವೆ. ಇಂದು 20ಕೋಟಿಗೂ ಅಧಿಕ ಕಾರ್ಮಿಕರು ಭಾರತ ಬಂದ್ ನಡೆಸುತ್ತಿದ್ದು ಅವರಿಗೆ ನನ್ನ ವಂದನೆಗಳು ಎಂದಿದ್ದಾರೆ.

SCROLL FOR NEXT