ದೇಶ

ಸಾಯಿ ಬಾಬಾ ಜನ್ಮಸ್ಥಳ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ: ನಾಳೆಯಿಂದ ಅನಿರ್ದಿಷ್ಟಾವಧಿವರೆಗೆ ಶಿರಡಿ ಮಂದಿರ ಬಂದ್ 

Sumana Upadhyaya

ಶಿರಡಿ: ಪರ್ಬಾನಿಯಲ್ಲಿರುವ ಪತ್ರಿ ಸಾಯಿಬಾಬಾ ಜನ್ಮಸ್ಥಳ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿರುವುದು ಹೊಸ ಸಂಚಲಕ್ಕೆ ಕಾರಣವಾಗಿದ್ದು, ಶಿರಡಿ ಮಂದಿರವನ್ನು ಅನಿರ್ದಿಷ್ಟಾವಧಿಯವರೆಗೆ ಮುಚ್ಚಲು ಕರೆ ನೀಡಲಾಗಿದೆ.


ಸಾಯಿಬಾಬಾ ಅವರ ಜನ್ಮಸ್ಥಳದ ಬಗ್ಗೆ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಶಿರಡಿ ಮಂದಿರವನ್ನು ನಾಳೆಯಿಂದ ಅನಿರ್ದಿಷ್ಟಾವಧಿಯವರೆಗೆ ಮುಚ್ಚುತ್ತಿದ್ದೇವೆ ಎಂದು ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಬಿ ವಕ್ಚೌರ್ ಹೇಳಿದ್ದಾರೆ.


ಇಂದು ಸಂಜೆ ಗ್ರಾಮಸ್ಥರ ಸಭೆ ಕರೆದು ಈ ಕುರಿತು ಚರ್ಚಿಸಲಾಗುವುದು. ಶಿರಡಿಗೆ ಬಂದ ಭಕ್ತರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೂಡ ತಿಳಿಸಿದ್ದಾರೆ. 

SCROLL FOR NEXT