ದೇಶ

ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟವರು ಸುಳ್ಳುಗಳನ್ನು ಹರಡುತ್ತಿದ್ದಾರೆ: ಪ್ರಧಾನಿ ಮೋದಿ

Manjula VN

ನವದೆಹಲಿ: ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟವರು ದೇಶದಲ್ಲಿ ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ ಮತ್ತು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಇಂದು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜೆ.ಪಿ. ನಡ್ಡಾ ಅವರನ್ನು ಅಭಿನಂದಿಸಿದ ಬಳಿಕ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ಹೆಚ್ಚು ಹೆಚ್ಟು ಸಕ್ರಿಯರಾಗುವ ಮೂಲಕ ಜನರಿಗೆ ಸತ್ಯವನ್ನು ತಿಳಿಸಿ ಎಂದು ಕರೆ ನೀಡಿದರು.

ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಭಾರತದ ಹಲವಾರು ಭಾಗಗಳಲ್ಲಿ ಸೇವೆ ಸಲ್ಲಿಸಲು ಬಿಜೆಪಿಗೆ ಅವಕಾಶಗಳು ದೊರೆತವು. ಸಂಸತ್ತಿನ ಚುನಾವಣೆಯಲ್ಲಿಯೂ ನಾವು ಅತಿ ಹೆಚ್ಚು ಸ್ಥಾನವನ್ನು ಪಡೆದುಕೊಂಡಿದ್ದೇವೆ. ಅಮಿತ್ ಶಾ ಬಿಜೆಪಿಯನ್ನು ವಿಸ್ತರಿಸಿದರು ಮತ್ತು ಬಲಪಡಿಸಿದರು ಎಂದೂ ಪ್ರಧಾನಿ ಮೋದಿ ಅಮಿತ್‌ ಶಾರನ್ನು ಶ್ಲಾಘಿಸಿದರು.

ಸರಕಾರ ಮತ್ತು ಪಕ್ಷದ ನಡುವೆ ತೆಳುವಾದ ರೇಖೆಯನ್ನು ಕಾಯ್ದುಕೊಳ್ಳುವುದು ನಮ್ಮ ಸವಾಲಾಗಿತ್ತು ಎಂದ ಮೋದಿ, ರಾಷ್ಟ್ರದ ನಿರೀಕ್ಷೆಗೆ ಅನುಗುಣವಾಗಿ ಬಿಜೆಪಿ ಬೆಳೆಯುತ್ತಿದೆ. ನಾವು ಇಂದಿಗೂ ನಮ್ಮ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಿದ್ದೇವೆ ಎಂದರು.

SCROLL FOR NEXT