ದೇಶ

ಸಿಎಎ ಬಗ್ಗೆ ಜನರಿಗೆ ಇರುವ ಆತಂಕ ಅರ್ಥ ಮಾಡಿಕೊಳ್ಳಿ: ಅಮಿತ್ ಶಾಗೆ ಕಪಿಲ್ ಸಿಬಲ್! 

Srinivas Rao BV

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿರುವುದಕ್ಕೂ ಮುನ್ನ ಕಪಿಲ್ ಸಿಬಲ್ ಅಮಿತ್ ಶಾಗೆ ಸಲಹೆ ನೀಡಿದ್ದಾರೆ. 

ಸಿಎಎ ಗೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜನರು ಏನು ಹೇಳುತ್ತಾರೆ ಎಂಬುದನ್ನು ಕೇಳುವ ಧೈರ್ಯವಿರಬೇಕು, ಜನರ ಆತಂಕಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. 

ಅಮಿತ್ ಶಾ ಲಖನೌ ನಲ್ಲಿದ್ದಾರೆ, ನಾವು ಪ್ರತಿಭಟನೆಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ, ನಿಜ ಗೃಹ ಸಚಿವರೇ ನೀವು ಯಾರಿಗೂ ಹೆದರಬೇಕಿಲ್ಲ. ಆದರೆ ಜನರು ಏನು ಹೇಳುತ್ತಾರೆ ಎಂಬುದನ್ನು ಕೇಳುವ ಧೈರ್ಯವಿರಬೇಕು, ಅವರ ಆತಂಕಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಬೇಕು ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. 

SCROLL FOR NEXT