ಸಿಬ್ಬಂದಿಯಿಂದ ಕೀಟನಾಶಕ ಸಿಂಪಡಣೆ 
ದೇಶ

ಈ ಮಳೆಗಾಲದಲ್ಲಿ ಮತ್ತೊಂದು ವೈರಸ್ ಸಮಸ್ಯೆ?: ಕೋವಿಡ್-19 ಜೊತೆಗೆ ಡೆಂಗ್ಯು ಜ್ವರ ವೈದ್ಯಲೋಕಕ್ಕೆ ಸವಾಲು

ನಮ್ಮ ದೇಶ ಸೇರಿದಂತೆ ಇಂದು ವಿಶ್ವಾದ್ಯಂತ ಕಾಡುತ್ತಿರುವ ಆರೋಗ್ಯ ಸಮಸ್ಯೆ ಕೋವಿಡ್-19. ಮುಂಗಾರು ಮಳೆ ಸತತವಾಗಿ ದೇಶಾದ್ಯಂತ ಸುರಿಯುತ್ತಿದೆ. ಇದರ ಜೊತೆಗೆ ಈ ಮಳೆಯಲ್ಲಿ ಸೊಳ್ಳೆಯಿಂದ ಹುಟ್ಟಿಕೊಳ್ಳುವ ಡೆಂಗ್ಯು ಜ್ವರ ಕೂಡ ಕಾಣಿಸಿಕೊಳ್ಳುತ್ತಿದ್ದು ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಯಕರ್ತರು, ವೈದ್ಯರಿಗೆ ತಲೆಬಿಸಿಯಾಗಿದೆ.

ನವದೆಹಲಿ: ನಮ್ಮ ದೇಶ ಸೇರಿದಂತೆ ಇಂದು ವಿಶ್ವಾದ್ಯಂತ ಕಾಡುತ್ತಿರುವ ಆರೋಗ್ಯ ಸಮಸ್ಯೆ ಕೋವಿಡ್-19. ಮುಂಗಾರು ಮಳೆ ಸತತವಾಗಿ ದೇಶಾದ್ಯಂತ ಸುರಿಯುತ್ತಿದೆ. ಇದರ ಜೊತೆಗೆ ಈ ಮಳೆಯಲ್ಲಿ ಸೊಳ್ಳೆಯಿಂದ ಹುಟ್ಟಿಕೊಳ್ಳುವ ಡೆಂಗ್ಯು ಜ್ವರ ಕೂಡ ಕಾಣಿಸಿಕೊಳ್ಳುತ್ತಿದ್ದು ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಯಕರ್ತರು, ವೈದ್ಯರಿಗೆ ತಲೆಬಿಸಿಯಾಗಿದೆ.

ಒಂದೆಡೆ ಕೋವಿಡ್-19 ಮತ್ತೊಂದೆಡೆ ಡೆಂಗ್ಯು ಜ್ವರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದಾದಿಯರಿಗೆ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಇಂದು ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 8 ಲಕ್ಷದ 20 ಸಾವಿರದ 916 ಆಗಿದ್ದು 22 ಸಾವಿರದ 123 ಮಂದಿ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಡೆಂಗ್ಯು ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. 2016ರಿಂದ 2-19ರ ನಡುವಿನ ಅಂಕಿಅಂಶ ಪ್ರಕಾರ ದೇಶದಲ್ಲಿ ಪ್ರತಿವರ್ಷ 1ರಿಂದ 2 ಲಕ್ಷ ಮಂದಿ ಡೆಂಗ್ಯು ಜ್ವರಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ 2019ರಲ್ಲಿ 1 ಲಕ್ಷದ 36 ಸಾವಿರದ 422 ಡೆಂಗ್ಯು ಪ್ರಕರಣಗಳು ವರದಿಯಾಗಿದ್ದು 132 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವೆಕ್ಟರ್ ರೋಗ ನಿಯಂತ್ರಣ ಕಾರ್ಯಕ್ರಮ(ಎನ್ ವಿಬಿಡಿಸಿಪಿ) ಹೇಳಿದೆ.

ಎರಡೂ ವೈರಸ್ ಗಳು ಒಂದಕ್ಕೊಂದು ಪೂರಕವಾಗಿ ಈ ವರ್ಷ ಮತ್ತಷ್ಟು ಅದರ ಕರಾಳ ಪ್ರಭಾವ ಬೀರಲಿದೆ ಎಂದು ಅಂದಾಜಿಸಿದ್ದಾರೆ ಕೋಲ್ಕತ್ತಾದ ಅಮಿಟಿ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ವೈರಾಲಜಿಸ್ಟ್ ಧ್ರುಬ್ ಜ್ಯೋತಿ ಚಟ್ಟೋಪಾಧ್ಯಾಯ ಹೇಳುತ್ತಾರೆ.

ಕೋವಿಡ್-19 ಮತ್ತು ಡೆಂಗ್ಯು ಜ್ವರ ಎರಡೂ ಒಂದೇ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಅತಿ ಜ್ವರ, ತಲೆನೋವು, ಮೈಕೈ ನೋವು ಲಕ್ಷಣಗಳಾಗಿವೆ. ಮಳೆಗಾಲದಲ್ಲಿ ಸೊಳ್ಳೆ ಕಾಟ ವಿಪರೀತವಾಗಿರುವುದರಿಂದ ಕೋವಿಡ್ ಮತ್ತು ಡೆಂಗ್ಯು ಜ್ವರ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.

ಕೋವಿಡ್-19 ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್, ವೈದ್ಯಕೀಯ ಸೌಲಭ್ಯಕ್ಕೆ ಸಮಸ್ಯೆಯಿರುವಾಗ ಡೆಂಗ್ಯು ಜ್ವರವೂ ಸೇರಿಕೊಂಡರೆ ಆರೋಗ್ಯ ವಲಯ ಸೇವೆಗೆ ಖಂಡಿತಾ ಈ ವರ್ಷ ದೊಡ್ಡ ಸವಾಲು ಎಂಬುದರಲ್ಲಿ ಸಂಶಯವೇ ಇಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT