ದೇಶ

ಕುಲಭೂಷಣ್ ಜಾಧವ್ ಭೇಟಿಗೆ ಬೇಷರತ್ ಅವಕಾಶ ಕೇಳಿದ ಭಾರತ

Raghavendra Adiga

ನವದೆಹಲಿ: ಕುಲಭೂಷಣ್ ಜಾಧವ್‌ ಅವರೊಂದಿಗೆ ಸಂಪರ್ಕ ಸಾಧಿಸಲು  ಬೇಷರತ್ತಾಗಿ ಅವಕಾಶ ನೀಡುವಂತೆ ಭಾರತ ಪಾಕಿಸ್ತಾನವನ್ನು ಕೇಳಿದೆ. 

ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ನೀಡಲಾದ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಪರಿಶೀಲನಾ ಅರ್ಜಿ ಸಲ್ಲಿಸಲು ಜಾಧವ್ ನಿರಾಕರಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಪರಿಶೀಲನೆಗಾಗಿ ಅರ್ಜಿಯನ್ನು ಸಲ್ಲಿಸಲು ಜಾಧವ್ ಅವರನ್ನು ಆಹ್ವಾನಿಸಿದ್ದೆವು. ಆದರೆ ಅವರು ನಿರಾಕರಿಸಿದರು ಮತ್ತು ಅವರ ಬಾಕಿ ಇರುವ ಕ್ಷಮಾದಾನ ಮನವಿಯೊಂದಿಗೆ ಮುಂದುವರಿಯಲು ನಿರ್ಧರಿಸಿದರು ಎಂದು ಪಾಕಿಸ್ತಾನದ ಹೆಚ್ಚುವರಿ ಅಟಾರ್ನಿ ಜನರಲ್ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನವು ಈಗ ಕುಲಭೂಷಣ್ ಜಾಧವ್ ಗೆರಡನೇ ಕಾನ್ಸುಲರ್ ಪ್ರವೇಶವನ್ನು ನೀಡಿದೆ ಎಂದು ವರದಿಯಾಗಿದೆ.

SCROLL FOR NEXT