ದೇಶ

ದೇಶದ ಗಡಿಗಳ ವಾಸ್ತವಿಕತೆ ಬಗ್ಗೆ ಎಲ್ಲರಿಗೂ ಗೊತ್ತಿದೆ: ರಕ್ಷಣಾ ನೀತಿ ಕುರಿತ 'ಶಾ' ಹೇಳಿಕೆಗೆ ರಾಹುಲ್ ವ್ಯಂಗ್ಯ

Manjula VN

ನವದೆಹಲಿ: ದೇಶದ ಗಡಿ ವಾಸ್ತವಿಕತೆ ಬಗ್ಗೆ ಎಲ್ಲರಿಗೂ ತಿಳಿದೇ ಎಂದು ಹೇಳುವ ಮೂಲಕ ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವ್ಯಂಗ್ಯವಾಡಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ದೇಶದ ಗಡಿಗಳ ವಾಸ್ತವಿಕತೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ, ಜನರ ಹೃದಯ ಸಂತೋಷಪಡಿಸುವುದೂ ಉತ್ತಮ ವಿಚಾರ ಎಂದು ವ್ಯಂಗ್ಯವಾಡಿದ್ದಾರೆ. 

ಬಿಹಾರ ರಾಜ್ಯದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಭಾನುವಾರ ಮಾತನಾಡಿದ್ದ ಅಮಿತ್ ಶಾ ಅವರು, ಪುಲ್ವಾಮ ಹಾಗೂ ಉರಿ ದಾಳಿ ಬಳಿಕ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಹಾಗೂ ಏರ್ ಸ್ಟ್ರೈಕ್ ಇತರೆ ರಾಷ್ಟ್ರಗಳಿಗೆ ಭಾರತದ ರಕ್ಷಣಾ ನೀತಿ ಎಷ್ಟು ಕಠಿಣವಾಗಿದೆ ಎಂಬ ಸಂದೇಶವನ್ನು ಸಾರಿತ್ತು. 

ಬಳಿಕ ಭಾರತದ ರಕ್ಷಣಾ ನೀತಿ ವಿಶ್ವದ ಮೆಚ್ಚುಗೆಯನ್ನೂ ಗಳಿಸಿತ್ತು. ಅಮೆರಿಕಾ, ಇಸ್ರೇಲ್ ನಂತರ ಗಡಿಗಳನ್ನು ರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿರುವ ರಾಷ್ಟ್ರವೆಂದರೆ ಅದು ಭಾರತ ಎಂದು ವಿಶ್ವವೇ ಒಪ್ಪಿಕೊಂಡಿದೆ ಎಂದು ಹೇಳಿದ್ದರು.

SCROLL FOR NEXT