ದೇಶ

ಗಡಿಯಲ್ಲಿ ಉಗ್ರರ ಬೇಟೆ ಶುರು: ಇಂದು 4 ಉಗ್ರರನ್ನು ಹೊಡೆದೆರುಳಿಸಿದ ಸೇನೆ, 1 ವಾರದಲ್ಲಿ 14 ಉಗ್ರರು ಮಟಾಶ್!

Vishwanath S

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಗಡಿ ನುಸುಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದನ್ನು ವಿಫಲಗೊಳಿಸುತ್ತಿರುವ ಭಾರತೀಯ ಸೇನೆ ಉಗ್ರರ ಹೆಡೆಮುರಿ ಕಟ್ಟುತ್ತಿದೆ. 

ಗಡಿಯಲ್ಲಿ ಉಗ್ರ ವಿರುದ್ಧ ಕಾರ್ಯಾಚರಣೆ ಶುರು ಮಾಡಿರುವ ಭಾರತೀಯ ಸೇನೆ ಇಂದು ಸಹ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ. 

ಕುಲ್ಗಾಮ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು ಭಾರತೀಯ ಸೇನೆ ಕಾರ್ಯಾಚರಣೆ ಕೈಗೊಂಡಿತ್ತು. ಕಾರ್ಯಾಚರಣೆಯಲ್ಲಿ ಒಟ್ಟು ನಾಲ್ವರು ಉಗ್ರರು ಇಂದು ಬಲಿಯಾಗಿದ್ದಾರೆ. 

ಇನ್ನು ಕಳೆದ ಒಂದು ವಾರದಿಂದ ಭಾರತೀಯ ಸೇನೆ ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಗಳು ಸೇರಿದಂತೆ 14 ಮಂದಿಯನ್ನು ಹೊಡೆದುರುಳಿಸಿದೆ. 

SCROLL FOR NEXT