ನವದೆಹಲಿ: ಪಕ್ಷದ ವಿರುದ್ಧ ಟೀಕೆ ಮಾಡಿ ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರ ಸ್ಥಾನದಿಂದ ಸಂಜಯ್ ಝಾ ಅವರಿಗೆ ಗೇಟ್ ಪಾಸ್ ನೀಡಲಾಗಿದೆ.
ಝಾ ಅವರನ್ನು ವಕ್ತಾರ ಸ್ಥಾನದಿಂದ ತೆಗೆದು ಹಾಕಿರುವ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿಷೇಕ್ ದತ್ ಸಾಧನಾ ಭಾರ್ತಿ ಅವರನ ಕಾಂಗ್ರೆಸ್ ಮಾಧ್ಯಮ ವಕ್ತಾರರನ್ನಾಗಿ ನೇಮಿಸಿದ್ದಾರೆ.
ಎಐಸಿಸಿ ವಕ್ತಾರ ಸ್ಥಾನದಿಂದ ಸಂಜಯ್ ಝಾ ಅವರನ್ನು ತೆಗೆದು ಹಾಕಿದು ಈ ಕ್ರಮ ತಕ್ಷಣವೇ ಜಾರಿಗೆ ಬರಲಿದೆ ಎಂದು ಕಾಂಗ್ರೆಸ್ ಅಧಿಕೃತ ಪ್ರಕಟಣೆ ತಿಳಿಸಿದೆ.