ದೇಶ

ತೆಲಂಗಾಣ: ಕಾಂಗ್ರೆಸ್ ಹಿರಿಯ ನಾಯಕ ವಿ.ಹನುಮತ ರಾವ್'ರಲ್ಲಿ ಕೊರೋನಾ ದೃಢ

Manjula VN

ಹೈದರಾಬಾದ್: ತೆಲಂಗಾಣ ರಾಜ್ಯದ ಕಾಂಗ್ರೆಸ್ ಹಿರಿಯ ನಾಯಕ ವಿ.ಹನುಮಂತ ರಾವ್ ಅವರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಭಾನುವಾರ ತಿಳಿದುಬಂದಿದೆ. 

ಕೊರೋನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಹನುಮಂತ ರಾವ್ ಅವರನ್ನು ಹೈದರಾಬಾದ್'ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರಲ್ಲಿ ವೈರಸ್ ದೃಢಪಟ್ಟಿದೆ ಎಂದು ವರದಿಗಳು ತಿಳಿಸಿವೆ. 

ಸೋಂಕಿಗೊಳಗಾಗಿದ್ದ ಹನುಮಂತ ರಾವ್ ಅವರು ಹಲವು ಪರಿಹಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು, ಲಾಕ್'ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಜನರಿಗೆ ದಿನಸಿ, ಹಾಗೂ ಸ್ಯಾನಿಟೈಸ್ ಕಿಟ್ ಗಳನ್ನು ವಿತರಿಸಿದ್ದರು. ಅಲ್ಲದೆ, ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನೂ ನಡೆಸಿದ್ದರು. 

ಅಲ್ಲದೆ, ಸರ್ಕಾರದ ನೀರಾವರಿ ಯೋಜನೆಗಳ ಕುರಿತು ನಡೆದ ಪ್ರತಿಭಟನೆ, ಪಕ್ಷದ ಕಾರ್ಯಚಟುವಟಿಕೆಗಳು ಹಾಗೂ ರಾಹುಲ್ ಗಾಂಧಿಯವರ ಹುಟ್ಟಹಬ್ಬದ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದು, ಹೀಗಾಗಿ ಆತಂಕ ಹೆಚ್ಚಾಗಿದೆ. 

ಕೆಲ ದಿನಗಳ ಹಿಂದಷ್ಟೇ ರಾವ್ ಅವರು ಗಾಂಧಿ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ, ಏಕತೆ ಪ್ರದರ್ಶಿಸಿದ್ದರು. ಈ ವೇಳೆ ಅವರಿಗೆ ವೈರಸ್ ತಗುಲಿರಬಹುದು ಎಂದು ಹೇಳಲಾಗುತ್ತಿದೆ. 

SCROLL FOR NEXT