ದೇಶ

ಕೊರೋನಾ ಪಾಸಿಟಿವ್: ಹೆಸರಾಂತ 'ಇರುತ್ತು ಕಡೈ' ಹಲ್ವಾ ಮಾಲೀಕ ಆತ್ಮಹತ್ಯೆಗೆ ಶರಣು

Lingaraj Badiger

ತಿರುನೆಲ್ವೇಲಿ: ನಗರದ ಜನಪ್ರಿಯ ಸಿಹಿ ತಿಂಡಿ 'ಇರುತ್ತು ಕಡೈ' ಹಲ್ವಾ ಮಾಲೀಕ ಹರಿ ಸಿಂಗ್ ಅವರು ಕೊರೋನಾ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಗುರುವಾರ ನಡೆದಿದೆ.

ಮೂಲಗಳ ಪ್ರಕಾರ, ಎರಡು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಹರಿ ಸಿಂಗ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಕೊವಿಡ್-19 ಪಾಸಿಟಿವ್ ಬಂದಿದೆ. ನಂತರ ತೀವ್ರ ಆತಂಕಗೊಂಡ ಹರಿ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹರಿ ಸಿಂಗ್ ಅವರಿಗೆ ಕೊವಿಡ್-19 ಲಕ್ಷಣಗಳು ಕಾಣಿಸಿಕೊಂಡ ನಂತರ ಅವರ ಸ್ವ್ಯಾಬ್ ಪರೀಕ್ಷೆ ಮಾಡಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹರಿ ಸಿಂಗ್ ಅವರು ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಿರುನೆಲ್ವೇಲಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ನೆಲ್ಲಯಪ್ಪರ್ ದೇವಸ್ಥಾನದ ಬಳಿ 100 ವರ್ಷಗಳ ಹಿಂದೆ ಆರಂಭವಾದ 'ಇರುತ್ತು ಕಡೈ ಹಲ್ವಾ'ವ ಅಂಗಡಿ ತಿರುನೆಲ್ವೇಲಿ ನಗರದ ಅತ್ಯಂತ ಜನಪ್ರಿಯ ಹಲ್ವಾ ಅಂಗಡಿಯಾಗಿದೆ.

SCROLL FOR NEXT