ಸಾಂದರ್ಭಿಕ ಚಿತ್ರ 
ದೇಶ

ಭಾಗಶಃ ಬಣ್ಣ ಕುರುಡುತನ ಹೊಂದಿರುವವರಿಗೂ ಚಾಲನಾ ಪರವಾನಗಿ: ಸರ್ಕಾರದ ಅಧಿಸೂಚನೆ

ದೇಶದಲ್ಲಿ ಸೌಮ್ಯ ಅಥವಾ ಭಾಗಶಃ ಬಣ್ಣ-ಕುರುಡುತನದಿಂದ ಬಳಲುತ್ತಿರುವವರಿಗೆ ಚಾಲನಾ ಪರವಾನಗಿ ನೀಡಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಶುಕ್ರವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೇಂದ್ರ ಮೋಟಾರು ವಾಹನ ನಿಯಮಗಳ 1989ರ ಫಾರ್ಮ್ 1 ಮತ್ತು ಫಾರ್ಮ್ 1ಎಗೆ ತಿದ್ದುಪಡಿ ತರಲು ಅಧಿಸೂಚನೆ ಹೊರಡಿಸಿದೆ.

ನವದೆಹಲಿ: ದೇಶದಲ್ಲಿ ಸೌಮ್ಯ ಅಥವಾ ಭಾಗಶಃ ಬಣ್ಣ-ಕುರುಡುತನದಿಂದ ಬಳಲುತ್ತಿರುವವರಿಗೆ ಚಾಲನಾ ಪರವಾನಗಿ ನೀಡಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಶುಕ್ರವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೇಂದ್ರ ಮೋಟಾರು ವಾಹನ ನಿಯಮಗಳ 1989ರ ಫಾರ್ಮ್ 1 ಮತ್ತು ಫಾರ್ಮ್ 1ಎಗೆ ತಿದ್ದುಪಡಿ ತರಲು ಅಧಿಸೂಚನೆ ಹೊರಡಿಸಿದೆ.

ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು 'ದಿವ್ಯಾಂಗವ್ಯಕ್ತಿ'ಯನ್ನು (ವಿಭಿನ್ನ ಸಾಮರ್ಥ್ಯ ಹೊಂದಿರುವವರು) ಶಕ್ತಗೊಳಿಸಲು ಸಚಿವಾಲಯ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ವಿಶೇಷವಾಗಿ ಚಾಲನಾ ಪರವಾನಗಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆ ರೂಪಿಸಲಾಗುತ್ತಿದೆ.

ದಿವ್ಯಾಂಗರಿಗೆ ಚಾಲನಾ ಪರವಾನಗಿಗೆ ಅನುಕೂಲವಾಗುವಂತೆ ಮತ್ತು ಏಕವರ್ಣದ ದೃಷ್ಟಿ ಹೊಂದಿರುವ ಜನರಿಗೆ ಈ ಹಿಂದೆ ಅನೇಕ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ.

ದೈಹಿಕ ಸಾಮರ್ಥ್ಯ(ಫಾರ್ಮ್ I) ಅಥವಾ ವೈದ್ಯಕೀಯ ಪ್ರಮಾಣಪತ್ರ(ಫಾರ್ಮ್ Iಎ) ಬಗ್ಗೆ ಘೋಷಣೆಯಲ್ಲಿನ ಅವಶ್ಯಕತೆಗಳಿಂದಾಗಿ ಬಣ್ಣ-ಕುರುಡು ನಾಗರಿಕರು ಚಾಲನಾ ಪರವಾನಗಿ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದರಿಂದ ವೈದ್ಯಕೀಯ ತಜ್ಞರ ಸಲಹೆಯೊಂದಿಗೆ ಈ ತಿದ್ದುಪಡಿ ತರಲಾಗಿದೆ.

ತಜ್ಞರ ನೀಡಿದ ಶಿಫಾರಸುಗಳಲ್ಲಿ, ಸೌಮ್ಯದಿಂದ ಮಧ್ಯಮ ಬಣ್ಣ-ಕುರುಡು ಹೊಂದಿರುವ ನಾಗರಿಕರಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದು ಮತ್ತು ತೀವ್ರ ಬಣ್ಣ-ಕುರುಡು ಹೊಂದಿರುವ ನಾಗರಿಕರಿಗೆ ವಾಹನ ಚಲಾಯಿಸುವುದನ್ನು ನಿರ್ಬಂಧಿಸುವಂತೆ ಸಲಹೆ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT