ಶಿವಸೇನೆ 
ದೇಶ

ರಾಜಕೀಯ ಪೈಪೋಟಿಯನ್ನು ಮರೆತು ಚೀನಾವನ್ನು ಎದುರಿಸುವ ಸಮಯ ಬಂದಿದೆ: ಶಿವಸೇನೆ

ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷಬೇಧವನ್ನು ಮರೆತು ಚೀನಾವನ್ನು ಎದುರಿಸುವ ವಿಷಯದ ಬಗ್ಗೆ ಮಾತನಾಡುವ ಸಮಯ ಈಗ ಬಂದಿದೆ ಎಂದು ಶಿವಸೇನೆ ಹೇಳಿದೆ.  

ಮುಂಬೈ: ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷಬೇಧವನ್ನು ಮರೆತು ಚೀನಾವನ್ನು ಎದುರಿಸುವ ವಿಷಯದ ಬಗ್ಗೆ ಮಾತನಾಡುವ ಸಮಯ ಈಗ ಬಂದಿದೆ ಎಂದು ಶಿವಸೇನೆ ಹೇಳಿದೆ. 

ಚೀನಾದಿಂದ ಕಾಂಗ್ರೆಸ್ ಹಣ ಪಡೆಯುತ್ತಿದೆ ಎಂದು ಆರೋಪಿಸಿದ ಬಿಜೆಪಿ ಬಗ್ಗೆ ತನ್ನ ಮುಖವಾಣಿಯಾದ ಸಾಮ್ನಾ ದಲ್ಲಿ ಬರೆದಿರುವ ಶಿವಸೇನೆ "ಚೀನಾ ಗಲ್ವಾನ್  ಕಣಿವೆಯಲ್ಲಿ ಹೊಸ ಹೊಸ ನಿರ್ಮಾಣ ಕಾರ್ಯ ಪ್ರಾರಂಭಿಸಿದೆ. ಚೀನಾದ ಸೈನಿಕರು ಅರುಣಾಚಲ ಮತ್ತು ಸಿಕ್ಕಿಂ ಮೂಲಕ ಬರುತ್ತಿದ್ದಾರೆ. ಆದ್ದರಿಂದ ರಾಜಕೀಯ ಪೈಪೋಟಿ ಮರೆತು  ಒಂದುಗೂಡಿಸುವ ಸಮಯ ಇದಾಗಿದೆ. ರಾಜಕೀಯ ಪಕ್ಷಬೇಧ ಮರೆತು ನಾವೀಗ ಚೀನಾ ವಿರುದ್ಧ ಹೋರಾಡಬೇಕು, ಆ ಬಗ್ಗೆ ಮಾತನಾಡಬೇಕು" ಸಂಪಾದಕೀಯ ಬರಹದಲ್ಲಿ ಹೇಳಿದೆ.

ಚೀನಾದ ನೀತಿಯನ್ನು ವಿವರಿಸಿದ ಶಿವಸೇನೆ, "ಚೀನಾ ನಿರಂತರವಾಗಿ ಇಂತಹ ಕುತಂತ್ರ ನಡೆಸುತ್ತಿದ್ದು ಇದು ಭಾರತದ ತಲೆನೋವು ಹೆಚ್ಚುವಂತೆ ಮಾಡಿದೆ.ಏನನ್ನೋ ಹೇಳಿ ಇನ್ನೇನನ್ನೋ ಮಾಡುವುದು ಚೀನಾ ನೀತಿ. . ಚೀನಾವು ಯುದ್ಧವನ್ನು ಬಯಸುವುದಿಲ್ಲ ಆದರೆ ಯುದ್ಧವನ್ನು ಮಾಡುವಂತೆ ಭಾರತವನ್ನು ಪ್ರಚೋದಿಸುವುದು ಅವರ ನೀತಿ. ಅದಕ್ಕಾಗಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ.

"ಚೀನಾ ತನ್ನ ಸೈನ್ಯ ಮತ್ತು ವಾಹನಗಳನ್ನು ಗಲ್ವಾನ್ ಕಣಿವೆಯಿಂದ ಹಿಂತೆಗೆದುಕೊಳ್ಳಲು ಸಜ್ಜಾಗಿದೆ. ಆದರೆ ಅದೇ ಸಮಯದಲ್ಲಿ, ಚೀನಾದ ಸೈನ್ಯವು ಲಡಾಖ್‌ನ ಡೆಪ್ಸಾಂಗ್ ಸೆಕ್ಟರ್‌ನಲ್ಲಿ ಹೊಸ ಡೇರೆಗಳನ್ನು ಸ್ಥಾಪಿಸಿದೆ.  ಕ್ಯಾನನ್ ಮತ್ತು ಟ್ಯಾಂಕರ್ ಗಳನ್ನು ನಿಯೋಜಿಸಿದೆ. ಇದರರ್ಥ ಚೀನಾ ಹೊಸ ಜಾಗವನ್ನು ಒಳಗೆಳೆದುಕೊಳ್ಳಲು ಹವಣಿಸಿದೆ. ಅಲ್ಲದೆ ಅದು ನಮ್ಮ ಗಡಿಯಿಂದ ಹಿಂದೆ ಸರಿಯಲು ಸಿದ್ದವಿಲ್ಲ. ಚೀನಾ ಯುದ್ಧವನ್ನು ಬಯಸುವುದಿಲ್ಲ ಆದರೆ ಅದು ಭಾರತದ ಮೇಲೆ ಯುದ್ಧದ ಬೆದರಿಕೆಯನ್ನು ಒಡ್ಡುತ್ತಿದೆ" ಶಿವಸೇನೆ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT