ದೇಶ

ರೆಡಿಕ್ಯುಲಸ್‌: ಸಂಸದ ತೇಜಸ್ವಿ ಸೂರ್ಯ ಕಾಲೆಳೆದ ಕಾರ್ತಿ ಚಿದಂಬರಂ

Shilpa D

ನವದೆಹಲಿ: ಕರೋನಾ ವೈರಸ್ ಆತಂಕದಿಂದಾಗಿ ಸದನ ನಡೆಸದಂತೆ ವಿರೋಧ ಪಕ್ಷಗಳು ಗದ್ದಲ  ಡೆಸಿದರು ಸರ್ಕಾರ ಕಲಾಪ ಮುಂದುವರಿಸುತ್ತಿದೆ. 

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಗೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅಪಹಾಸ್ಯ ಮಾಡಿದ್ದಾರೆ.  ಕೊರೋನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಸಂಸದರು ವೈದ್ಯರು ಹಾಗೂ ಸೈನಿಕರಂತೆ ಕೆಲಸ ಮಾಡಬೇಕು ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಈ ಹೋಲಿಕೆ ತೀರಾ ಹಾಸ್ಯಾಸ್ಪದ ಎಂದು ರೀಟ್ವೀಟ್ ಮಾಡಿದ್ದಾರೆ.

ಕರೋನಾ ವೈರಸ್ ಹರಡದಂಂತೆ ಸಮಾಜದಲ್ಲಿ ಜನರನ್ನು ದೂರ ಇಡಲು ಜಾಗೃತೆ ವಹಿಸುವ ನಾವು ಸದನದಲ್ಲಿ ಒಟ್ಟಿಗೆ ಕುಳಿತುಕೊಳ್ಳಬೇಕಾಗಿರುವುದು ವಿಪರ್ಯಾಸ ಎಂದು  ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ,  ಸಂಸದರು ವಿಶೇಷ ವ್ಯಕ್ತಿಗಳೇನಲ್ಲ, ವೈದ್ಯರು, ಹೆಲ್ತ್ ಕೇರ್ ವರ್ಕರ್ಸ್, ಗಡಿಯಲ್ಲಿರುವ ಸೈನಿಕರು  ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಎಲ್ಲಾ ಅಡೆತೆಗಳನ್ನು ನಿವಾರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ,  ಮುಂಜಾಗ್ರತೆ ಅಗತ್ಯವೇ ಹೊರತು ಅದರಿಂದ ಆತಂಕ್ಕೊಳಗಾಗಬಾರದು ಎಂದು ಸಲಹೆ ನೀಡಿದ್ದಾರೆ. 

SCROLL FOR NEXT