ದೇಶ

ಕೋವಿಡ್-19: ತೆಲಂಗಾಣಕ್ಕೆ 2 ಕೋಟಿ ನೆರವು ನೀಡಿದ ಸತ್ಯ ನಾಡೆಲ್ಲ ಪತ್ನಿ ಅನುಪಮಾ! 

Nagaraja AB

ಹೈದ್ರಾಬಾದ್: ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ತೆಲಂಗಾಣ ರಾಜ್ಯಕ್ಕೆ  ಸಾಪ್ಟ್ ವೇರ್ ದಿಗ್ಗಜ ಕಂಪನಿ ಮೈಕ್ರೋಸಾಪ್ಟ್ ಸಿಇಒ ಸತ್ಯ ನಾಡೆಲ್ಲ ಅವರ ಪತ್ನಿ ನೆರವು ನೀಡಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ಬಡವರಿಗೆ ನೆರವು ನೀಡುವ ನಿಟ್ಟಿನಲ್ಲಿ ಸತ್ಯ ನಾಡೆಲ್ಲ ಅವರ ಪತ್ನಿ ಅನುಪಮಾ ವೇಣುಗೋಪಾಲ್ ನಾಡೆಲ್ಲ ಮುಖ್ಯಮಂತ್ರಿಗಳ ಕಲ್ಯಾಣ ನಿಧಿಗೆ 2 ಕೋಟಿ ರೂ. ಕೊಡುಗೆ ನೀಡಿದ್ದಾರೆ.

ಕೊರೋನಾವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಸ್ತುತ ತೆಲಂಗಾಣದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. 
 

SCROLL FOR NEXT