ಕಾಸರಗೋಡು: ಅಫ್ಘಾನಿಸ್ತಾನದ ಕಾಬೂಲ್ನ ಸಿಖ್ ಗುರುದ್ವಾರದಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣದಲ್ಲಿ ಕಾಸರಗೋಡು ಮೂಲಕ ವ್ಯಕ್ತಿಯ ಕೈವಾಡವಿರುವುದರ ಬಗ್ಗೆ ಕೇರಳ ರಾಜ್ಯ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೇರಳದ ಕಾಸರಗೋಡು ನಿವಾಸಿ ಅಬು ಖಾಲಿದ್ ಅಲ್ ಹಿಂದ್ ಇತ್ತೀಚೆಗೆ ಲಷ್ಕರ್ ಇ.ತಯಿಬಾ ಸಂಘಟನೆ ಸೇರಿದ್ದ ಎಂದು ಮೂಲಗಳು ತಿಳಿಸಿವೆ.
ದಾಳಿಯಲ್ಲಿ ಭಾಗಿಯಾದ ದಾಳಿಕೋರರ ಭಾವಚಿತ್ರವನ್ನು ಆಧರಿಸಿ ಈತನನ್ನು ಶಂಕಿತಸಲಾಗಿದೆ. ಪಾಕಿಸ್ತಾನದ ಲಷ್ಕರ್ ತಯಿಬಾದ ಹಕ್ಕಾನಿ ಗುಂಪಿನೊಂದಿಗೆ ಐಎಸ್ ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತಿದೆ.